Get Updates
Get notified of breaking news, exclusive insights, and must-see stories!

ನದಿಗೆ ಬಿದ್ದ ಮಂಗಳೂರು - ಚೆನ್ನೈ ಮೇಲ್‌ ಭಾರಿ ಸಾವಿನ ಶಂಕೆ

ಕೋಳಿಕ್ಕೋಡ್‌ : ಕೇರಳದ ಮಲ್ಲಪುರಂ ಜಿಲ್ಲೆಯ ಕೋಳಿಕ್ಕೋಡ್‌ ಬಳಿ ಶುಕ್ರವಾರ ಸಂಜೆ 5 ಗಂಟೆಯ ಸಮಯದಲ್ಲಿ ಮಂಗಳೂರು - ಚೆನ್ನೈ ಮೇಲ್‌ ಹಳಿತಪ್ಪಿದ ಪರಿಣಾಮವಾಗಿ ಮೂರು ಬೋಗಿಗಳು ಕಡಲುಂಡಿ ನದಿಗೆ ಉರುಳಿದ್ದು 16 ಮಂದಿ ಸತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಅಪಘಾತ ನಡೆದ ಸ್ಥಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪರಿಹಾರ ಕಾಮಗಾರಿಗೆ ಅಡ್ಡಿಯಾಗಿದೆ. ಈ ಪ್ರದೇಶದಲ್ಲಿ ಕಳೆದ ಒಂದು ವಾರದಿಂದಲೂ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮವಾಗಿ ಕಡಲುಂಡಿ ನದಿ ಉಕ್ಕಿಹರಿಯುತ್ತಿದೆ. ಕೋಳಿಕ್ಕೋಡ್‌ಗೆ 20 ಕಿ.ಮೀಟರ್‌ ದೂರದ ಈ ಸೇತುವೆಯಿಂದ ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನ 3 ಬೋಗಿಗಳು ನದಿಗೆ ಉರುಳಿದ್ದು, ಇನ್ನೂ ಮೂರು ಬೋಗಿಗಳು ಹಳಿತಪ್ಪಿವೆ.

ಆದರೂ, ಮಳೆಯನ್ನು ಲೆಕ್ಕಿಸದೆ ನೌಕಪಡೆ, ಸ್ವಯಂಸೇವಕರು, ಅರೆ ಸೇನಾಪಡೆಯ ಸಿಬ್ಬಂದಿ ನೀರಿನಲ್ಲಿ ಮುಳುಗಿರುವ ಬೋಗಿಗಳಿಂದ ಜನರನ್ನು ರಕ್ಷಿಸಲು ಹೋರಾಟ ನಡೆಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಧಾವಿಸಿರುವ ಕೇರಳದ ಮುಖ್ಯಮಂತ್ರಿ ಎ.ಕೆ. ಆಂಟನಿ ಅವರು ಕೋಳಿಕ್ಕೋಡ್‌ ತಲುಪಿದ್ದಾರೆ. ಈ ಮಧ್ಯೆ ಅಪಘಾತದ ಬಗ್ಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಕೇಂದ್ರ ರೈಲ್ವೆ ಸಚಿವ ನಿತೀಶ್‌ ಕುಮಾರ್‌ ತ್ವರಿತ ಕಾಮಗಾರಿಗೆ ಆದೇಶ ನೀಡಿದ್ದಾರೆ. ಅವರೂ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ.

ಈವರೆಗೆ 100ಕ್ಕೂ ಹೆಚ್ಚು ಗಾಯಾಳುಗಳನ್ನು ಕೋಳಿಕ್ಕೋಡ್‌ನ ವೈದ್ಯಕೀಯ ಕಾಲೇಜು ಅಸ್ಪತ್ರೆಗೆ ಸೇರಿಸಲಾಗಿದೆ. ನೀರಿನಿಂದ 10 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ನೂರಾರು ಜನ ಬೋಗಿಯಲ್ಲಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ನೀಡಲು ನಿರ್ವಹಣೆ ಕೇಂದ್ರವನ್ನು ತೆರೆಯಲಾಗಿದೆ. ಪ್ರಯಾಣಿಕರ ಬಂಧು - ಮಿತ್ರರಿಗೆ ಮಾಹಿತಿ ಒದಗಿಸಲಾಗುತ್ತಿದೆ.

ನಿರ್ವಹಣೆ ಕೇಂದ್ರದ ದೂರವಾಣಿ ಸಂಖ್ಯೆ - 0471 - 333147, 0495 - 701499, 0471 - 333196, 0471 - 327375.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+