ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೀಣಾ ವಾದಕ ಶ್ರೀನಿವಾಸನ್ಗೆ ‘ಮಹಾರಾಜಪುರಂ ಸಂತಾನಂ ಪ್ರಶಸ್ತಿ ’
ಬೆಂಗಳೂರು : ಈ ಸಾಲಿನ ಪ್ರತಿಷ್ಟಿತ ‘ಮಹಾರಾಜಪುರಂ ಸಂತಾನಂ ಸ್ಮಾರಕ ಪ್ರಶಸ್ತಿ ’ ಗೆ ಖ್ಯಾತ ವೀಣಾ ವಾದಕ ಪ್ರೊ. ಟಿ.ಟಿ. ಶ್ರೀನಿವಾಸನ್ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ಶ್ರೀನಿವಾಸನ್ ಅವರು ವೀಣಾ ವಾದಕರಾಗಿ ದೇಶ ವಿದೇಶದಳಲ್ಲಿ ಹೆಸರು ಮಾಡಿದವರು. ಮಹಾರಾಜಪುರಂ ಸಂತಾನಂ ಪ್ರತಿಷ್ಠಾನದ ಈ ಪ್ರಶಸ್ತಿಯನ್ನು ಜೂನ್ 24ರಂದು ಚೆನ್ನೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ವೀಣಾ ವಾದಕ ಶ್ರೀನಿವಾಸನ್ ಅವರು ಈಗಾಗಲೇ ಅಮೆರಿಕೆಯ ತಮಿಳು ಸಂಘ, ಉಡುಪಿಯ ಗಣೇಶೋತ್ಸವ ಸಮಿತಿ, ಬಳ್ಳಾರಿಯ ವಾಗ್ದೇವಿ ವೀಣಾ ವಿದ್ಯಾಲಯ, ಬೆಂಗಳೂರಿನ ಸಚ್ಚಿದಾನಂದ ಗಣಪತಿ ಆಶ್ರಮದಿಂದ ಸನ್ಮಾನಿತರಾಗಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Tuesday, June 19, 2001, 5:30 [IST]