ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲಮಂಗಲದಲ್ಲಿ ದರೋಡೆ : 7 ಮಂದಿಗೆ ಗಾಯ,ಲಕ್ಷ ರು.ಲೂಟಿ

By Staff
|
Google Oneindia Kannada News

ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಯ ನೆಲಮಂಗಲ ಹೊರ ವಲಯದಲ್ಲಿನ 2 ಮನೆಗಳ ಮೇಲೆ ಮಂಗಳವಾರ ಮುಂಜಾವಿನಲ್ಲಿ ದಾಳಿ ನಡೆಸಿರುವ ದರೋಡೆಕೋರರ ತಂಡ, ಏಳು ಜನರನ್ನು ಗಾಯಗೊಳಿಸಿದೆ ಹಾಗೂ 1 ಲಕ್ಷ ರುಪಾಯಿಗೂ ಹೆಚ್ಚು ಮೌಲ್ಯದ ನಗ ನಾಣ್ಯಗಳನ್ನು ದೋಚಿ ಪರಾರಿಯಾಗಿದೆ.

ಹುಚ್ಚ ಹನುಮೇಗೌಡ ಎಂಬವರ ಮನಗೆ ನುಗ್ಗಿದ ದರೋಡೆಕೋರರು, ಪ್ರತಿಭಟಿಸಿದ ಹನುಮೇಗೌಡ, ಅವರ ಪತ್ನಿ ಲಲಿತಾ ಹಾಗೂ ಅವರ ಮಗನ ಮೇಲೆ ಹಲ್ಲೆ ಮಾಡಿ 35 ಸಾವಿರ ರುಪಾಯಿ ನಗದು ಹಾಗೂ ಅಂದಾಜು 50 ಸಾವಿರ ರುಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಆನಂತರ ಮತ್ತೊಂದು ಮನೆಗೆ ನುಗ್ಗಿದ ದರೋಡೆಕೋರರ ತಂಡ ಲಕ್ಷ್ಮೀಬಾಯಿ ಎನ್ನುವ ಮನೆಯಾಡತಿ ಅವರ ಮಕ್ಕಳು ಹಾಗೂ ಮನೆ ಕೆಲಸದಾಕೆಯನ್ನು ಗಾಯಗೊಳಿಸಿ 50 ಸಾವಿರ ರುಪಾಯಿ ನಗದು ದೋಚಿದ್ದಾರೆ.

ಗಾಯಗೊಂಡ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೋರರ ತಂಡದಲ್ಲಿ ಎಂಟು ಮಂದಿ ಇದ್ದು, ಅವರೆಲ್ಲರೂ ಮುಖವಾಡ ಧರಿಸಿದ್ದರು. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X