Get Updates
Get notified of breaking news, exclusive insights, and must-see stories!

ಕಾವೇರಿ ಕೊಳ್ಳ ಕೆರೆಗಳ ವಿವಾದ: ಕೇಂದ್ರದವಿರುದ್ಧ ಮುನಿದ ಕೃಷ್ಣ

ನವದೆಹಲಿ : ಕಾವೇರಿ ಕೊಳ್ಳದ ಕೆರೆಗಳಲ್ಲಿ ಹೂಳೆತ್ತಬಾರದು ಎನ್ನುವ ಕೇಂದ್ರದ ನಿರ್ದೇಶನವನ್ನು ಸಾರಾ ಸಗಟಾಗಿ ತಿರಸ್ಕರಿಸಿರುವ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕೇಂದ್ರ ಸರ್ಕಾರದೊಂದಿಗೆ ನೇರ ಸಂಘರ್ಷಕ್ಕೆ ಇಳಿದಿದ್ದಾರೆ.

ಹೂಳೆತ್ತದಂತೆ ನಿರ್ಬಂಧ ಹೇರಿರುವ ಕೇಂದ್ರ ಜಲ ಆಯೋಗದ ಆದೇಶವನ್ನು ಪ್ರಧಾನಿ ವಾಜಪೇಯಿ ಅಥವಾ ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಮುಂದೆ ಅಗತ್ಯ ಬಿದ್ದಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ಸಂಜೆ ಬೆಂಗಳೂರಿಗೆ ವಾಪಸ್ಸಾಗುವ ಮುನ್ನ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೃಷ್ಣ ಈ ವಿಷಯ ತಿಳಿಸಿದರು. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಯಾವುದೇ ವೇದಿಕೆಯಲ್ಲೂ ಈ ವಿಷಯದ ಪ್ರಸ್ತಾಪಕ್ಕೆ ತಾವು ಹಿಂಜರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

8 ಸಾವಿರ ಕೆರೆಗಳ ಹೂಳೆತ್ತುವ ಕಾಮಗಾರಿ ಮುಂದುವರಿಯುವುದು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ . ಒಂದು ವೇಳೆ ಕೇಂದ್ರ ಸರ್ಕಾರದ ನಿರ್ಬಂಧದ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ ಆಕ್ಷೇಪ ವ್ಯಕ್ತಪಡಿಸಿದಲ್ಲಿ ಇತರ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಣದಿಂದ ಹೂಳೆತ್ತುವ ಕಾರ್ಯವನ್ನು ರಾಜ್ಯ ಸರ್ಕಾರ ಮುಂದುವರಿಸುವುದು ಎಂದು ಕೃಷ್ಣ ಹೇಳಿದರು.

ವಿಶ್ವಬ್ಯಾಂಕ್‌ನ 996 ಕೋಟಿ ರುಪಾಯಿ ನೆರವು ಇನ್ನೇನು ಕರ್ನಾಟಕಕ್ಕೆ ಹರಿದುಬರಬೇಕು ಎನ್ನುವ ಹೊತ್ತಿನಲ್ಲಿ ಕೇಂದ್ರ ಹಣಕಾಸು ಇಲಾಖೆ ಮತ್ತು ಜಲ ಆಯೋಗ ಕಾವೇರಿ ಕೊಳ್ಳ ಪ್ರದೇಶದ ಕೆರೆಗಳ ಹೂಳೆತ್ತದಂತೆ ಹೊರಡಿಸಿರುವ ಆದೇಶ ಕೃಷ್ಣ ಅವರನ್ನು ರೊಚ್ಚಿಗೇಳಿಸಿದೆ. ಇತ್ತೀಚೆಗೆ ತಾನೆ ಆಂಧ್ರದ ಚಂದ್ರಬಾಬು ನಾಯ್ಡು ಅವರಿಗೆ ವಾಜಪೇಯಿ ವಿಶೇಷ ಮಮತೆ ತೋರುತ್ತಿರುವ ಕುರಿತು ಕೃಷ್ಣ ಆಕ್ಷೇಪ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+