Get Updates
Get notified of breaking news, exclusive insights, and must-see stories!

ಸಿಇಟಿ ಪರೀಕ್ಷೆಯ ಮೂಲಕವೇ ಬಿಇಡಿ ಶಿಕ್ಷಕರ ನೇಮಕಕ್ಕೆ ಒತ್ತಾಯ

ಬೆಂಗಳೂರು : ಪ್ರಸ್ತುತ ಪ್ರೌಢಶಾಲಾ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಸರ್ಕಾರ, ಸಿಇಟಿ ಪರೀಕ್ಷೆಯ ಮೂಲಕವೇ ಬಿಇಡಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕೆಂದು ರಾಜ್ಯ ಪದವೀಧರ ಶಿಕ್ಷಕರ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.

ಶಿಕ್ಷಕರ ತರಬೇತಿ ಸಂಸ್ಥೆಗಳು ವ್ಯಾಪಾರೀಕರಣಗೊಂಡಿರುವುದರಿಂದ- ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಆಂತರಿಕ ಅಂಕ ನೀಡುವ ಪದ್ಧತಿ, ಮೌಲ್ಯಮಾಪನ ಪದ್ಧತಿ, ಪಠ್ಯ ವಿಷಯ ಇತ್ಯಾದಿಗಳಲ್ಲಿ ತಾರತಮ್ಯವಿದ್ದು ನಿಜವಾದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ. ಆ ಕಾರಣ ಪ್ರಸ್ತುತ ನೇಮಕಾತಿ ಪದ್ಧತಿಯನ್ನು ಕೈ ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಯನ್ನು ನೇಮಕಾತಿಯ ಮಾನದಂಡವನ್ನಾಗಿ ಅನುಸರಿಸುವಂತೆ ವೇದಿಕೆ ಆಗ್ರಹಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಭಾನುವಾರ ಕಬ್ಬನ್‌ ಉದ್ಯಾನದಲ್ಲಿ ಪದವೀಧರ ಶಿಕ್ಷಕರ ಹಿತರಕ್ಷಣಾ ವೇದಿಕೆಯ ಸದಸ್ಯರು ಸಭೆ ನಡೆಸಿದರು. ವೇದಿಕೆಯ ಇತರ ಒತ್ತಾಯಗಳು ಇಂತಿವೆ-

  • ಡಾ.ರಾಜಾರಾಮಣ್ಣ ಸಮಿತಿ ಶಿಫಾರಸ್ಸಿನಂತೆ 6 ಮತ್ತು 7 ನೇ ತರಗತಿಗಳಿಗೆ ಬಿ.ಇಡಿ ಪದವೀಧರ ಶಿಕ್ಷಕರನ್ನು ಪ್ರಸಕ್ತ ಸಾಲಿನಿಂದಲೇ ನೇಮಿಸಿಕೊಳ್ಳಬೇಕು. ಈ ಪದ್ಧತಿ ನೆರೆಯ ಆಂಧ್ರ, ಕೇರಳಗಳಲ್ಲಿ ಹಾಗೂ ನವೋದಯ ಮತ್ತು ಕೇಂದ್ರೀಯ ಶಾಲೆಗಳಲ್ಲಿ ಪ್ರಸ್ತುತ ಜಾರಿಯಲ್ಲಿದೆ.
  • ರಾಜ್ಯದ ಕೇಂದ್ರೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನೇ ಕಡ್ಡಾಯಗೊಳಿಸುವಂತೆ ಕೇಂದ್ರವನ್ನು ರಾಜ್ಯಸರ್ಕಾರ ಒತ್ತಾಯಿಸಬೇಕು.
  • ಅನ್ಯ ಕಾರ್ಯ ನಿಮಿತ್ತ ಶಿಕ್ಷಕರು ತೆರಳಿದಾಗ ಅವರ ಜಾಗೆಯಲ್ಲಿ ನಿವೃತ್ತ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸುವ ಪದ್ಧತಿ ಕೈಬಿಟ್ಟು ನಿರುದ್ಯೋಗಿ ಪದವೀಧರರನ್ನು ನೇಮಿಸಬೇಕು.
  • ಶಾಶ್ವತ ಅನುದಾನ ರಹಿತ, ಖಾಸಗಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕನಿಷ್ಠ 3500 ರು. ವೇತನ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕಾಯ್ದೆ ರೂಪಿಸಬೇಕು.
    ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಚಳವಳಿ ನಡೆಸುವುದಾಗಿ ವೇದಿಕೆ ಎಚ್ಚರಿಸಿದೆ.
(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+