Get Updates
Get notified of breaking news, exclusive insights, and must-see stories!

‘ನನ್ನ ಭಾರತ ಪ್ರವಾಸ ಇತಿಹಾಸ ಬದಲಿಸುತ್ತದೆ’- ಮುಷರ್ರಫ್‌

ಇಸ್ಲಮಾಬಾದ್‌ : ತಾವು ಮುಕ್ತ ಮನಸ್ಸಿನಿಂದ ಭಾರತಕ್ಕೆ ತೆರಳುತ್ತಿದ್ದು , ಈ ಭೇಟಿ ಇತಿಹಾಸವನ್ನು ಬದಲಿಸುತ್ತದೆಂದು ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್‌ ಪವ್ರೇಜ್‌ ಮುಷರ್ರಫ್‌ ತಮ್ಮ ಮೂರು ದಿನಗಳ ಭಾರತ ಪ್ರವಾಸವನ್ನು ಶುಕ್ರವಾರ ರಾತ್ರಿ ಬಣ್ಣಿಸಿಕೊಂಡಿದ್ದಾರೆ. ಮುಷರ್ರಫ್‌ ಭಾರತ ಭೇಟಿಯಿಂದ ಅಷ್ಟೇನೂ ಉಪಯೋಗವಿಲ್ಲ ಎಂದು ಭಾರತೀಯ ಜನತಾಪಕ್ಷದ ನಾಯಕರು ಹೇಳುತ್ತಿರುವ ಬೆನ್ನಿಗೇ ಈ ಹೇಳಿಕೆ ಹೊರಬಿದ್ದಿರುವುದು ಗಮನಾರ್ಹ.

ನಾನು ಮುಕ್ತ ಮನಸ್ಸಿನಿಂದ ಭಾರತಕ್ಕೆ ತೆರಳುತ್ತಿದ್ದೇನೆ. ಅವರು ಕೂಡ ನನ್ನಷ್ಟೇ ಮುಕ್ತವಾಗಿ ಮಾತುಕತೆಯಲ್ಲಿ ಪಾಲ್ಗೊಳ್ಳುವರೆಂದು ನಂಬಿದ್ದೇನೆ ಎಂದು ಶುಕ್ರವಾರ ರಾತ್ರಿ ದೂರದರ್ಶನ ಹಾಗೂ ಆಕಾಶವಾಣಿಯ ಪ್ಯಾನಲ್‌ ಡಿಸ್ಕಷನ್‌ನ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.

ಮುಕ್ತ ಮಾತುಕತೆ- ಕಾಶ್ಮೀರ ವಿಷಯವೇ ಪ್ರಧಾನ
ಭಾರತ ಸರ್ಕಾರ ಹಾಗೂ ನಾಯಕರು ಮುಕ್ತ ಮನಸ್ಸಿನಿಂದ ಮಾತುಕತೆಯಲ್ಲಿ ತೊಡಗುವರೆಂದು ನಾನು ನಂಬಿದ್ದೇನೆ. ಈ ಸಾರಿ ನಾವು ಇತಿಹಾಸವನ್ನು ಬದಲಾಯಿಸುತ್ತೇವೆ. ನಾನು ಭಾರತಕ್ಕೆ ಹೋಗುತ್ತಿರುವುದು ಇದೇ ಉದ್ದೇಶಕ್ಕಾಗಿಯೇ. ಸಹಕಾರ ಮನೋಭಾವ ಸಾಧ್ಯವಾಗಿಸುವ ಮೂಲಕ ಹೊಸ ಶಕೆಯನ್ನು ಪ್ರಾರಂಭಿಸುತ್ತೇವೆ ಎಂದು ಮುಷರ್ರಫ್‌ ವಿಶ್ವಾಸ ವ್ಯಕ್ತಪಡಿಸಿದರು.

ಉಭಯ ದೇಶಗಳ ನಡುವಣ ಮಾತುಕತೆಯಲ್ಲಿ ಕಾಶ್ಮೀರ ವಿಷಯವೇ ಪ್ರಧಾನವಾದುದು ಎನ್ನುವುದನ್ನು ಒತ್ತಿ ಹೇಳಿದ ಅವರು, ಈ ಬಗ್ಗೆ ನನ್ನ ನಿಲುವು ಅತ್ಯಂತ ಸ್ಪಷ್ಟವಾಗಿದೆ, ಕಾಶ್ಮೀರ ವಿಷಯವನ್ನು ಸರಳಗೊಳಿಸುವುದು ಮಾತುಕತೆಯ ಯಶಸ್ಸಿಗೆ ಪೂರಕವಾಗುವುದಿಲ್ಲ ಎಂದು ಒತ್ತಿ ಹೇಳಿದರು.

ಅನಿಲ ಕೊಳವೆ ಪ್ರಸ್ತಾವನೆಗೆ ಅಡ್ಡಿಯಿಲ್ಲ : ಇರಾನ್‌ನಿಂದ ಭಾರತಕ್ಕೆ ಪಾಕಿಸ್ತಾನದ ಮೂಲಕ ಅನಿಲ ಕೊಳವೆಯನ್ನು ಅಳವಡಿಸುವ ಪ್ರಸ್ತಾವನೆಯ ಕುರಿತು ಉತ್ತರಿಸಿದ ಅವರು, ಈ ವಿಷಯದಲ್ಲಿ ಸಹಕರಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದರು. ಪ್ರವಾಸ ಕಾಲದಲ್ಲಿ ಶ್ರೀನಗರದಿಂದ ಮುಝಾಪ್ಪರಾಬಾದ್‌ವರೆಗೆ ಬಸ್‌ನಲ್ಲಿ ಪ್ರಯಾಣಿಸಲು ಯಾವುದೇ ಅಭ್ಯಂತರವಿಲ್ಲವೆಂದು ಹೇಳಿದ ಅವರು, ಈ ಪ್ರಯಾಣವನ್ನು ನಾನು ಇಷ್ಟಪಡುತ್ತೇನೆ ಎಂದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+