ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾಗಮಂಡಲ ಪ್ರದೇಶದದಲ್ಲಿ ಮಳೆ, ಕನ್ನಂಬಾಡಿ ಕಟ್ಟೆಗೆ ನೀರು
ಮೈಸೂರು : ಕಾವೇರಿ ಜಲಾನಯನ ಪ್ರದೇಶದ ಜನರ ಕನಸುಗಳಿಗೆ ಮತ್ತೆ ಮಳೆ ಬಿದ್ದಿದೆ. ತಲ ಕಾವೇರಿ ಭಾಗಮಂಡಲ ಪ್ರದೇಶಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಕನ್ನಂಬಾಡಿಗೆ ನೀರು ಹರಿದುಬರುತ್ತಿದೆ, ಜಲಾಶಯದ ನೀರಿನ ಮಟ್ಟವೂ ಹೆಚ್ಚುತ್ತಿದೆ.
ಕಳೆದ ಎರಡು ದಿನಗಳಲ್ಲಿ ಭಾಗಮಂಡಲದಲ್ಲಿ ಬಿದ್ದ ಮಳೆಯ ಪ್ರಮಾಣ 10 ಸೆಂಮೀ. ಜೂನ್ 6 ರಿಂದ ಈ ಪ್ರದೇಶದಲ್ಲಿ ಒಟ್ಟು 60 ಸೆಂಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತಮ ಮಳೆಯಿಂದಾಗಿ ಈ ಭಾಗದ ಕೃಷಿಕರು ನೆಮ್ಮದಿಯ ಉಸಿರುಬಿಟ್ಟರೆ, ಮೈಸೂರಿನ ಜನತೆ ಕುಡಿಯುವ ನೀರಿನ ಆತಂಕದಿಂದ ಬಿಡುಗಡೆ ಹೊಂದಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Saturday, June 16, 2001, 5:30 [IST]