ಮುಂಗಾರ ನಂತರ ಕರಾವಳಿಯ ಏಳು ಕಡೆ ಕಾಯಂ ತಡೆಗೋಡೆ
ಬೆಂಗಳೂರು: ಮಳೆಗಾಲ ಬರುವಾಗ ಜೊತೆಯಲ್ಲಿಯೇ ಕರಾವಳಿಯಲ್ಲಿ ಕಡಲು ಕೊರೆತದ ಆಲಾಪವನ್ನು ಕರೆತರುತ್ತದೆ. ಪ್ರಸಕ್ತ ಮುಂಗಾರು ಮುಗಿಯುತ್ತಲೇ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಕರಾವಳಿಯ ಏಳು ಕಡೆಗಳಲ್ಲಿ ಕಾಯಂ ತಡೆಗೋಡೆ ನಿರ್ಮಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಬಿ. ರಮಾನಾಥ ರೈ ಪುನರುಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವರು, ರಾಷ್ಟ್ರೀಯ ಕರಾವಳಿ ಸಂರಕ್ಷಣೆ ಕಾರ್ಯಕ್ರಮದ ಕ್ರಿಯಾ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಶೇ .75ರಷ್ಟು ಅಂದರೆ 10 ಕೋಟಿ ರೂಪಾಯಿ ನೆರವು ನೀಡಲಿದೆ. ಉಳಿದ ಹಣವನ್ನು ರಾಜ್ಯಸರಕಾರವೇ ಭರಿಸಲಿದೆ ಎಂದು ಹೇಳಿದರು.
ಉಡುಪಿ ತಾಲ್ಲೂಕಿನ ಕೆಮ್ಮಣ್ಣು ಮತ್ತು ಎರ್ಮಾಳ, ಕುಂದಾಪುರ ತಾಲ್ಲೂಕಿನ ಪಡುವರಿ, ಮಂಗಳೂರು ತಾಲ್ಲೂಕಿನ ಸಸಿಹಿತ್ಲು, ಅಂಕೋಲಾ ತಾಲ್ಲೂಕಿನ ಬೆಳಂಬರ, ಕುಮಟಾ ತಾಲ್ಲೂಕಿನ ಆಳ್ವೇಕೋಡಿ, ಬಂಟ್ವಾಳದ ಗೊರಟೆ ಕರಾವಳಿ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ.
ಉಲ್ಲಾಳದ ಕೋಟೆಪುರ ಮತ್ತು ಉಡುಪಿಯ ಪಡತೊನೈ ಭಾಗದಲ್ಲಿ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜ್ನ ಸಲಹೆ ಮೇರೆಗೆ ತಡೆಗೋಡೆ ನಿರ್ಮಿಸಲಾಗುವುದು ಎಂದು ರಮಾನಾಥ ರೈ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...