ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ವರ್ಷ ಪೂರ್ತಿ ರಾಜಕೀಯ ಮಾಡೊಲ್ಲ - ಅಂಬರೀಷ್‌

By Staff
|
Google Oneindia Kannada News

ಮಂಡ್ಯ : ಅಂಬಿ ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನಿಗಳು ಹೇಳಿಕೊಂಡು ಸಂತೋಷ ಪಡುತ್ತಿದ್ದರೆ, ವರ್ಷ ಪೂರ್ತಿ ರಾಜಕೀಯ ಮಾಡುವುದು ತಮ್ಮ ಉದ್ದೇಶವಲ್ಲವೆಂದು ಅಂಬರೀಷ್‌ ಹೇಳಿದ್ದಾರೆ.

ಒಳಗೆರೆ ಎಂಬುದೊಂದು ಮದ್ದೂರು ತಾಲ್ಲೂಕಿನ ಹಳ್ಳಿ. ಅಲ್ಲಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹಾಗೂ ಸಂಸದ ಅಂಬರೀಷ್‌ ಅವರ 49 ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ಹಮ್ಮಿಕೊಂಡಿದ್ದರು. ಹುಟ್ಟುಹಬ್ಬದ ವೇದಿಕೆ 9 ಜೋಡಿಗಳಿಗೆ ಹಸೆಮಣೆಯೂ ಆಗಿದ್ದುದು ಕಾರ್ಯಕ್ರಮದ ವಿಶೇಷ.

ದೇಶ ಸೇವೆ ಮಾಡುವುದು ನನ್ನ ಉದ್ದೇಶ
ಅದಕ್ಕಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಪ್ರಸ್ತುತ ಸಿನಿಮಾದಿಂದ ಅಘೋಷಿತ ನಿವೃತ್ತಿ ತೆಗೆದುಕೊಂಡು ವೃತ್ತಿಪರ ರಾಜಕಾರಣಿಯಾಗಿರುವ ಅಂಬರೀಷ್‌ ಅಭಿಮಾನಿಗಳ ಚಪ್ಪಾಳೆಗಳ ನಡುವೆ ಘೋಷಿಸಿದರು. ಆದರೆ, ಪಕ್ಷ ರಾಜಕಾರಣಿಗಳಂತೆ ವರ್ಷ ಪೂರ್ತಿ ರಾಜಕೀಯ ಮಾಡುವುದು ತಮ್ಮ ಜಾಯಮಾನವಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು.

ದಾವಣಗೆರೆ ಅಭಿಮಾನಿಗಳಷ್ಟು ಒಳಗೆರೆಯ ಅಭಿಮಾನಿಗಳು ಶ್ರೀಮಂತರಲ್ಲವಾದ್ದರಿಂದ ಅಲ್ಲಿ ಕಿರೀಟ ತೊಡಿಸುವ ಕಾರ್ಯಕ್ರಮ ಇರಲಿಲ್ಲ . ಸಿನಿಮಾ ನಟನಾಗಲೇಬೇಕೆಂದು ಪಟ್ಟು ಹಿಡಿದಿರುವ ಐಎಎಸ್‌ ಶಿವರಾಂ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹೋಲಿಸಿದರೆ ಇಲ್ಲಿನದು ಸರಳ ಸನ್ಮಾನ ಕಾರ್ಯಕ್ರಮ. ನಟನಿಗೆ ಹೂ ಹಾರ ಹಾಕಿ ಅಭಿಮಾನಿಗಳು ಖುಷಿಪಟ್ಟರು.

ಅಂಬರೀಷ್‌ ಅವರಂತೆಯೇ ಡಬ್ಬಲ್‌ ರೋಲ್‌ ಮಾಡುವಲ್ಲಿ ಪಳಗಿರುವ ಶಾಸಕ ಹಾಗೂ ನಾಯಕ ಸಿ.ಪಿ. ಯೋಗೇಶ್ವರ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂ.ಎಸ್‌. ಸಿದ್ಧರಾಜು, ರೈತ ಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X