ಕ್ರಿಕೆಟ್ : ಜೈತ್ರಯಾತ್ರೆಯ ನಡುವೆ ಎಡವಿದ ಇಬ್ಬರು ಭಾರತೀಯರು
ಹರಾರೆ : ಶಡಗೋಪನ್ ರಮೇಶ್ಗೆ ಬೆನ್ನು ನೋವು. ಆಶಿಶ್ ನೆಹ್ರ ಬೌಲ್ ಮಾಡಿದ ನಂತರ ಪಿಚ್ ಮೇಲೆ ಓಡುತ್ತಾರೆಂಬ ಆರೋಪ. ಭಾರತದ ಕ್ರಿಕೆಟ್ ಪಾಳಯದಲ್ಲಿ ಈ ಹೊತ್ತು ಚಿಂತೆಗೀಡುಮಾಡಿರುವ ವಿಷಯ ಇದು.
ಎರಡನೇ ಟೆಸ್ಟ್ಗೆ ಇನ್ನೂ ಎರಡು ದಿನ ಇದೆ. ತಂಡದ ಫಿಸಿಯೋ ಆ್ಯಂಡ್ರೂ ಲೀಪಸ್ ರಮೇಶ್ ಬೆನ್ನು ನೋವು ಕಳಕೊಳ್ಳುವಂತೆ ಸರಳ ವ್ಯಾಯಾಮ ಮಾಡಿಸುತ್ತಿದ್ದಾರೆ. ರಮೇಶ್ ಮರಳುತ್ತಾರೆ ಎಂಬ ಭರವಸೆ ನನ್ನದು ಎನ್ನುತ್ತಾರೆ ತಂಡದ ಕೋಚ್ ಜಾನ್ ರೈಟ್. ಬೌಲಿಂಗ್ ಮಾಡಿ, ಪಿಚ್ ಮೇಲೆ ಓಡುವುದು ಕ್ರಿಕೆಟ್ನಲ್ಲಿ ತಾಂತ್ರಿಕ ತಪ್ಪು. ನೆಹ್ರ ಇದನ್ನು ಮಾಡಿದರು. ಬುಲವೆಯೋ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಈ ಕಾರಣಕ್ಕೇ ಅವರು ಬೌಲಿಂಗ್ ಮುಂದುವರಿಸಲಾಗಲಿಲ್ಲ.
ಗಂಗೂಲಿ ಈಗ ಏನು ಯೋಚಿಸುತ್ತಿದ್ದಾರೆ... ಕೆದಕಿದಾಗ, ಅವರು ಬಾಯಿ ತೆರೆದರು...
ನೆಹ್ರ ವಿಷಯ ಗಂಭೀರವಾದದ್ದೇ. ಜಹೀರ್ ಕೂಡ ಇದೇ ತಪ್ಪನ್ನು ಆಗಾಗ ಮಾಡುತ್ತಾರೆ. ಅವರೂ ಹುಷಾರಾಗಿರಬೇಕು. ಒಂದು ವೇಳೆ ಶುಕ್ರವಾರ (ಜೂನ್ 15) ಪ್ರಾರಂಭವಾಗಲಿರುವ 2ನೇ ಟೆಸ್ಟ್ನಲ್ಲಿ ರಮೇಶ್ ಆಡಲಾಗದಿದ್ದರೆ, ದ್ರಾವಿಡ್ ಅಥವಾ ಹೇಮಾಂಗ್ ಬದಾನಿ ದಾಸ್ ಜೊತೆ ಬ್ಯಾಟಿಂಗ್ ಇನ್ನಿಂಗ್ಸ್ ಶುರುಮಾಡುವ ಯೋಚನೆಯಿದೆ.
ನನ್ನ ವೈಯಕ್ತಿಕ ಆಟ ಸುಧಾರಿಸಬೇಕಿದೆ (ಕಳೆದ 4 ಟೆಸ್ಟ್ಗಳಲ್ಲಿ ಗಂಗೂಲಿ ಗಳಿಸಿರುವುದು 111 ರನ್ ಮಾತ್ರ). ನಾಯಕತ್ವವೇನೂ ನನ್ನ ಆಟದ ಎಡರಾಗಿಲ್ಲ. 18 ತಿಂಗಳಿಂದ ಈ ಭಾರ ಹೊತ್ತಿದ್ದೇನೆ. ಫಾರ್ಮ್ ಕಳೆದುಕೊಂಡಿದ್ದೇನೆ. ವಾಪಸ್ಸಾಗಬೇಕಷ್ಟೆ.
ಜಿಂಬಾಬ್ವೆ ಪಾಳಯದಲ್ಲಿ.... ಹೀತ್ ಸ್ಟ್ರೀಕ್ಗೆ ಸಣ್ಣಗೆ ಕಾಲುನೋವು ಕಾಣಿಸಿಕೊಂಡಿದ್ದರಿಂದ ಬುಲೆವಿಯೋ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಬೌಲ್ ಮಾಡಲಿಲ್ಲ. ಹೆನ್ರಿ ಒಲಾಂಗ ಅವರಿಗೆ ಮಂಡಿ ನೋವು. ಒಲಾಂಗ ಆಡದಿರುವ ಸಾಧ್ಯತೆಯೇ ಹೆಚ್ಚು. ಅವರ ಬದಲಿಗೆ ಟ್ರ್ಯಾವಿಸ್ ಫ್ರೆಂಡ್ ತಂಡ ಸೇರುವ ನಿರೀಕ್ಷೆಯಿದೆ.
ಭಾರತಕ್ಕೆ ವಿಶ್ವಾಸ : 15 ವರ್ಷಗಳ ನಂತರ ವಿದೇಶೀ ನೆಲದಲ್ಲಿ ಟೆಸ್ಟ್ ಗೆದ್ದು ಬೀಗುತ್ತಿರುವ ಭಾರತ ತಂಡಕ್ಕೆ ವಿಜಯ ಯಾತ್ರೆ ಮುಂದುವರೆಸುವ ಆತ್ಮವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನಾವು ಕಳಕೊಳ್ಳಲು ಸಿದ್ಧರಿಲ್ಲ ಎನ್ನುತ್ತಾರೆ ಗಂಗೂಲಿ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications