Get Updates
Get notified of breaking news, exclusive insights, and must-see stories!

ಧಾರವಾಡ ಜಿ.ಪಂ. ಸದಸ ್ಯಬಸವಣ್ಣಪ್ಪಹಂಚಿನಾಳ ಗುಂಡಿಗೆ ಬಲಿ

ಧಾರವಾಡ : ಇಲ್ಲಿನ ಸೋಮಾಪುರದ ಬಳಿ ಜಿಲ್ಲಾ ಪಂಚಾಯತ್‌ ಸದಸ್ಯ ಬಸವಣ್ಣಪ್ಪ ಹಂಚಿನಾಳ (53) ಅವರನ್ನು ಗುಂಡಿಟ್ಟು ಸಾಯಿಸಿದ ಘಟನೆ ಮಂಗಳವಾರ ನಡೆದಿದೆ.

ಹಂಚಿನಾಳ ಅವರು ನ್ಯಾಯಾಲಯದ ಪ್ರಕರಣವೊಂದಕ್ಕೆ ಹಾಜರಾಗಲು ತಮ್ಮ ವಾಹನದಲ್ಲಿ ಬರುತ್ತಿದ್ದಾಗ ಗೋವನಕೊಪ್ಪದ ಸೋಮಾಪುರ ಬಳಿ ಜೀಪೊಂದರಲ್ಲಿ ಬಂದ ದುಷ್ಕರ್ಮಿಗಳ ಗುಂಪು ಬಸವಣ್ಣಪ್ಪ ಅವರ ಮೇಲೆ ಗುಂಡು ಹಾರಿಸಿ ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದೆ.

ಮೂರು ತಿಂಗಳ ಹಿಂದೆ ಧಾರಾವಡದ ಬಳಿ ಕೊಲೆಯಾದ ಮೊರಬ ಗ್ರಾಮದ ಉದಯ ಗೌಡ ಅವರ ಸೋದರರು ಮತ್ತು ಬೆಂಬಲಿಗರು ದುಷ್ಕರ್ಮಿಗಳ ಗುಂಪಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಬಸವಣ್ಣಪ್ಪ ಹಂಚಿನಾಳ ಅವರು ಉದಯ ಗೌಡರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದರು. ಆ ಕೊಲೆಗೆ ಪ್ರತಿಯಾಗಿ ಉದಯ ಗೌಡರ ಬೆಂಬಲಿಗರು ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಸವಣ್ಣಪ್ಪ ಅವರ ಬೆಂಬಲಿಗರು, ಗುರುನಾಥಗೌಡ, ಸುಭಾಶ್‌ ಗೌಡ, ಯೋಗೇಶ್‌ ಗೌಡ, ಗೋಲಂದಾಜ ಅವರ ಹೆಸರನ್ನು ದಾಖಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+