ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟರಾಜ ಗವಾಯಿಗಳು ನಡೆದಾಡುವ ದೇವರು-ಎಚ್ಕೆ ಪಾಟೀಲ್‌

By Staff
|
Google Oneindia Kannada News

ಗದಗ- ಸಾವಿರಾರು ಮಂದಿ ಅಂಧ ವಿದ್ಯಾರ್ಥಿಗಳಿಗೆ ಜಾತಿ ಮತದ ಹಂಗಿಲ್ಲದೆ ಸಂಗೀತ ಕಲಿಸುತ್ತಿರುವ ಪಂಡಿತ ಪುಟ್ಟ ರಾಜ ಗವಾಯಿ ಅವರಿಗೆ ಗದುಗಿನಲ್ಲಿ ಸಂಗೀತಾಭಿಮಾನಿಗಳು ಚಿನ್ನದ ಕಿರೀಟ ತೊಡಿಸಿ ಸಂಭ್ರಮಿಸಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪುಟ್ಟರಾಜಗವಾಯಿಗಳಿಗೆ 1100 ಗ್ರಾಂ ತೂಕದ ಬಂಗಾರದ ಕಿರೀಟ ತೊಡಿಸಿದವರು ಡಾ. ಮೂಜಗಂ. 250 ಗ್ರಾಂ ತೂಕದ ಭಿನ್ನವತ್ತಳೆಯನ್ನು ಸಚಿವ ಎಚ್‌. ಕೆ. ಪಾಟೀಲ್‌ ಅವರು ಗವಾಯಿಗಳಿಗೆ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಸಚಿವ ಎಚ್‌. ಕೆ. ಪಾಟೀಲ್‌, ಸಂಗೀತ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಪುಟ್ಟ ರಾಜ ಗವಾಯಿಗಳ ಸಾಧನೆ ದೊಡ್ಡದು . ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಟೊಂಕ ಕಟ್ಟಿರುವ ಗವಾಯಿಗಳು ನಡೆದಾಡುವ ದೇವರು ಎಂದು ಕೊಂಡಾಡಿದರು. ಅವರ ನೇತೃತ್ವದಲ್ಲಿ ನಡೆಯುತ್ತಿರುವ ವೀರೇಶ್ವರ ಪುಣ್ಯಾಶ್ರಮ ರಾಷ್ಟ್ರದ ಮಾನವೀಯ ವಿಶ್ವ ವಿದ್ಯಾಲಯ ಎಂದು ಅವರು ಬಣ್ಣಿಸಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ಸಚಿವ ರೋಶನ್‌ ಬೇಗ್‌ ಮಾತನಾಡಿ ಖ್ಯಾತ ಗಾಯಕ ನುಸೃತಫತೆ ಆಲಿಖಾನ್‌ ಅವರ ಸಂಗೀತ ಕಾರ್ಯಕ್ರಮದಿಂದ ಸಂಗ್ರಹವಾದ 5 ಲಕ್ಷ ರೂಪಾಯಿಗಳನ್ನು ಗವಾಯಿಗಳ ಸೇವೆಗೆ ಸಮರ್ಪಿಸಿರುವುದಾಗಿ ತಿಳಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X