ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುಕಟ್ಟೆಯಲ್ಲಿ ಗ್ರಾಹಕರಬೊಗಸೆಗೆ ‘ಅಮೃತ’ ಬ್ರಾಂಡ್‌ ನೀರಾ

By Staff
|
Google Oneindia Kannada News

ಸಾಗರ : ನುಸಿರೋಗದ ಕಾಟದಿಂದ ತಪ್ಪಿಸಿಕೊಳ್ಳಲು ತೆಂಗು ಬೆಳೆಗಾರರು ಹಮ್ಮಿಕೊಂಡಿರುವ ನೀರಾ ಚಳುವಳಿ ಎಗ್ಗಿಲ್ಲದೆ ಮುಂದುವರೆದಿದೆ. ತೆಂಗಿನ ಮರದಿಂದ ಇಳಿಸಿದ ಈ ನೀರಾ ವನ್ನು ‘ಅಮೃತ ’ ಎಂಬ ಬ್ರಾಂಂಡ್‌ ಹೆಸರಿನಲ್ಲಿ ಮಾರಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ. ಡಿ. ನಂಜುಂಡ ಸ್ವಾಮಿ ಹೇಳಿದ್ದಾರೆ.

ರಾಜ್ಯಾದ್ಯಂತ ನೀರಾ ಚಳುವಳಿಯನ್ನು ಆರಂಭಿಸಲಾಗಿದ್ದು ನೀರಾವನ್ನು ಹೆಚ್ಚು ಕಾಲ ಕಾಯ್ದಿರಿಸುವ ತಂತ್ರಜ್ಞಾನವೊಂದನ್ನು ಪತ್ತೆ ಮಾಡಲಾಗಿದೆ. ಈ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದ ತಕ್ಷಣ ಅಮೃತ ಎಂಬ ಬ್ರಾಂಡ್‌ ನೇಮ್‌ನೊಂದಿಗೆ ದೇಶಾದ್ಯಂತ ನೀರಾ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದರಿಂದ ನುಸಿರೋಗದಿಂದಾಗಿ ನೆಲಕಚ್ಚಿರುವ ತೆಂಗು ಮಾರುಕಟ್ಟೆ ಮತ್ತು ತೆಂಗು ಬೆಳೆಗಾರರಿಗೆ ಸಹಾಯವಾಗಲಿದೆ ಎಂದು ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ನಂಜುಂಡ ಸ್ವಾಮಿ ವಿವರಿಸಿದ್ದಾರೆ.

ತೆಂಗು ಬೆಳೆ ನಿಷೇಧಿತವಾದುದೇನೂ ಅಲ್ಲ. ಆದ್ದರಿಂದ ತೆಂಗಿನ ಸಹ ಉತ್ಪನ್ನಗಳಿಗೂ ಯಾವುದೇ ನಿಷೇಧವನ್ನು ಹೇರುವುದು ಸರಿಯಲ್ಲ. ನೀರಾಕ್ಕೆ ಅಬ್ಕಾರಿ ಸುಂಕ ವಿಧಿಸುವುದು ಸಂವಿಧಾನ ಬದ್ಧವಲ್ಲ . ಇದಕ್ಕೆ ಸಂಬಂಧಿಸಿದಂತೆ ಇರುವ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ನಂಜುಂಡ ಸ್ವಾಮಿ ಸರಕಾರವನ್ನು ಆಗ್ರಹಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X