ಅಕ್ಷರ ಹೋರಾಟ : ನಿಮ್ಮ ಪುಟ್ಟನನ್ನು ಬಾಲವಾಡಿಗೆ ಸೇರಿಸಿಯಮ್ಮಾ...
* ಇಮ್ರಾನ್ ಖುರೇಷಿ
ಬೆಂಗಳೂರು : ಆಕೆಗೆ ಈಗ ಹದಿನೆಂಟು ವರ್ಷ. ಹತ್ತನೇ ತರಗತಿವರೆಗೆ ಓದಿದ್ದಾಳೆ. ಉಲ್ಫತ್ ಅಂತ ಹೆಸರು. ಇನ್ನೇನು ಮನೆಯಲ್ಲಿ ಕುಳಿತು ಮದುವೆಯ ಕನಸು ಕಾಣುವ ವಯಸ್ಸು. ಆದರೆ ಆಕೆ ಹೊಸದೊಂದು ಗುರಿ ಇಟ್ಟುಕೊಂಡಿದ್ದಾಳೆ. ಮನೆಯ ನಾಲ್ಕು ಗೋಡೆಗಳಿಂದ ಆಚೆಗೆ ಬಂದಿದ್ದಾಳೆ.
ಅಕ್ಕ ಪಕ್ಕದ ಮನೆಯವರಿಗೆ, ಪರಿಚಯದ ಕುಟುಂಬಗಳಲ್ಲಿ ಶಾಲೆಗೆ ಸೇರುವ ವಯಸ್ಸಿನ ಮಕ್ಕಳು ಶಾಲೆಗೆ ಹೋಗದೇ ಇದ್ದರೆ ಅವರಿಗೆ ವಿದ್ಯೆ ಕಲಿಯುವಂತೆ ಹೇಳುತ್ತಾಳೆ. ಆ ಕೂಸಿನ ಅಪ್ಪ ಅಮ್ಮನಿಗೆ ವಿದ್ಯೆಯ ಮಹತ್ವವನ್ನು ವಿವರಿಸುತ್ತಾಳೆ. ಈ ಪುಟ್ಟನನ್ನು ಬಾಲವಾಡಿಗೆ ಸೇರಿಸಿಯಮ್ಮಾ ಎನ್ನುತ್ತಾಳೆ.
ಉಲ್ಫತ್ ಒಂಟಿಯಾಗಿ ಈ ಆಂದೋಲನವನ್ನು ಹಮ್ಮಿಕೊಂಡಿಲ್ಲ. ಜೊತೆಗೆ ಲಲಿತಾ ಬಾಯಿ ಇದ್ದಾಳೆ. ಆರು ವರ್ಷದ ಹುಡುಗಿಯಾಬ್ಬಳು ಹಸುಳೆ ತಮ್ಮನನ್ನೆತ್ತಿಕೊಂಡಿರುವುದನ್ನು ನೋಡಲಿಕ್ಕಾಗುವುದಿಲ್ಲ ಎಂದು ಲಲಿತಾ ಹೇಳುತ್ತಾರೆ.
ಬೆಂಗಳೂರಿನಲ್ಲಿ 2003ರ ವೇಳೆಗೆ ಪ್ರತಿ ಮಗುವಿಗೂ ಶಿಕ್ಷಣ ಎಂಬ ಸರಕಾರದ ಘೋಷಣೆಯನ್ನು ವಾಸ್ತವವಾಗಿಸಲು ಹೋರಾಡುತ್ತಿರುವವರು ಇವರು. ಮೂರರಿಂದ ಐದು ವರ್ಷದ ವರೆಗಾದರೂ ಕನಿಷ್ಠ ವಿದ್ಯಾಬ್ಯಾಸ ಪಡೆವಂತೆ ಮಾಡುವ, ಅರ್ಧದಲ್ಲಿಯೇ ಶಾಲೆ ಬಿಟ್ಟಿರುವ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಹೊಣೆಯನ್ನು ಹೆಗಲ ಮೇಲೆ ಹೊತ್ತುಕೊಂಡ ಈ ಇಬ್ಬರೂ ಹುಡುಗಿಯರು, ಆರ್ಥಿಕ ಸಹಾಯ ನೀಡಲೂ ದುಡಿಯುತ್ತಿದ್ದಾರೆ. ಜೊತೆಗೊಂದು ಗುಂಪೇ ಇದೆ. ಅದು ಅಕ್ಷರ ಸಂಘಟನೆ.
ಪುಟ್ಟ ಮಕ್ಕಳು ಶಾಲೆಯಲ್ಲಿಯೇ ಇರಬೇಕು
ಐಸಿಐಸಿಐ ಬ್ಯಾಂಕ್ನ ಅಧ್ಯಕ್ಷ ಎನ್. ವೇಣುಗೋಪಾಲ್, ಅಜೀಮ್ ಪ್ರೇಮ್ಜೀ ಫೌಂಡೇಷನ್, ಮೈಂಡ್ ಟ್ರೀ ಕನ್ಸಲ್ಟಿಂಗ್, ಬಿಪಿಎಲ್ ಇನೊವೇಷನ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ , ಜಾರ್ಜ್ ಫೌಂಡೇಷನ್, ಮತ್ತಿತರರು ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುತ್ತಾರೆ. ಉಲ್ಫತ್ ಖುಷಿಯಿಂದ ಹೇಳುತ್ತಾರೆ- ಇದೆಲ್ಲಾ ಸಾಧ್ಯವಾಗುತ್ತದೆ ಅಂತ ನಾನು ಯೋಚಿಸಿಯೇ ಇರಲಿಲ್ಲ. ಈಗ ಹೆತ್ತವರೇ ತಮ್ಮ ಅಕ್ಕಪಕ್ಕದ ಮನೆ ಮತ್ತು ಪರಿಚಯದವರಿಗೆ ಮಕ್ಕಳನ್ನು ಬಾಲವಾಡಿಗೆ ಸೇರಿಸುವಂತೆ ಒತ್ತಾಯಿಸುತ್ತಿರುವುದು ನೋಡಿದಾಗ ಖುಷಿಯಾಗುತ್ತದೆ.
ಹೆತ್ತವರ ಬಳಿ ಮಕ್ಕಳಿಗಾಗಿ ಖರ್ಚು ಮಾಡಲು ಹಣ ಇಲ್ಲ ಎಂಬ ಕಾರಣಕ್ಕಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಅಂತ ಅಜೀಮ್ ಪ್ರೇಮ್ಜಿ ಫೌಂಡೇಷನ್ನ ಕಾರ್ಯನಿರ್ವಾಹಕ ಸದಸ್ಯ ಸಿ.ವಿ. ಮಧುಕರ್ ಹೇಳುತ್ತಾರೆ. ಅಕ್ಷರ ವೇದಿಕೆಯ ಮುಖ್ಯ ಉದ್ದೇಶವೇ ಬೆಂಗಳೂರಿನ ಪ್ರತಿ ಮಗುವೂ ಶಾಲೆಯಲ್ಲಿ ಇರಬೇಕೆಂಬುದು.
ಪ್ರತಿಯಾಬ್ಬರಿಗೂ ಶಿಕ್ಷಣ ಎಂಬುದು ಬರೀ ಘೋಷಣೆಯಲ್ಲ. ಬೆಂಗಳೂರು ಆ ನಿಟ್ಟಿನಲ್ಲಿ ಸಾಗುತ್ತಿದೆ ಎಂಬ ಹೆಮ್ಮೆ ಅಕ್ಷರ ಸಂಘಟನೆಗಿದೆ. ಸರಕಾರದ ಘೋಷಣೆ ಕಾರ್ಯರೂಪಕ್ಕೆ ಬರಲು ಅವಿರತ ಹೋರಾಟ ನಡೆಯುತ್ತಿದೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications