ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಸುಳಿವಿಗೆ ನೀಡುವಬಹುಮಾನದ ಮೊತ್ತದಲ್ಲಿ ಹೆಚ್ಚಳ

By Staff
|
Google Oneindia Kannada News

ಚೆನ್ನೈ : ನರಹಂತಕ ವೀರಪ್ಪನ್‌ ಬಗ್ಗೆ ಸುಳಿವು ನೀಡಿದ ವ್ಯಕ್ತಿಗಳಿಗೆ ಘೋಷಿಸಲಾಗಿದ್ದ ಬಹುಮಾನದ ಮೊತ್ತವನ್ನು 20 ಲಕ್ಷ ರು.ಗಳಿಂದ 25 ಲಕ್ಷ ರುಪಾಯಿಗೆ ಹೆಚ್ಚಿಸಿರುವುದಾಗಿ ತಮಿಳುನಾಡು ಸರ್ಕಾರ ಪ್ರಕಟಿಸಿದೆ.

ವೀರಪ್ಪನ್‌ನ ಬಲಗೈ ಬಂಟ ಎಂದು ಬಣ್ಣಿಸಲಾಗುತ್ತಿರುವ ಸೇತುಕುಳಿ ಗೋವಿಂದನ್‌ ಹಾಗೂ ಕಾಡುಗಳ್ಳನ ಇನ್ನಿತರ ಸಹಚರರ ಬಗ್ಗೆ ಮಾಹಿತಿ ನೀಡುವವವರಿಗೆ ಘೋಷಿಸಲಾಗಿದ್ದ ಬಹುಮಾನದ ಮೊತ್ತವನ್ನೂ ತಮಿಳುನಾಡು ಸರ್ಕಾರ ಹೆಚ್ಚಿಸಿದೆ. ಸೇತುಕುಳಿ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳಿಗೆ ಈ ಮುನ್ನ ನೀಡುವುದಾಗಿ ಪ್ರಕಟಿಸಿದ್ದ 10 ಲಕ್ಷ ರುಪಾಯಿ ಬಹುಮಾನವನ್ನು 15 ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದ್ದರೆ, ವೀರಪ್ಪನ್‌ನ ಇತರ ಅನುಚರರ ಕುರಿತು ನೀಡುವ ಸುಳಿವಿಗೆ 10 ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು.

ವೀರಪ್ಪನ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಹಾಗೂ ವಿಶೇಷ ಕಾರ್ಯಾಚರಣೆ ಪಡೆಗೆ ಸಹಕಾರ ನೀಡುವ ಗ್ರಾಮಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವುದಾಗಿಯೂ ಜಯಲಲಿತಾ ಸರ್ಕಾರ ಆಶ್ವಾಸನೆ ನೀಡಿದೆ. ದತ್ತು ತೆಗೆದುಕೊಳ್ಳುವ ಮೂಲಕ ಅಂಥಾ ಗ್ರಾಮಗಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವುದಾಗಿ ಸರ್ಕಾರದ ಪ್ರಕಟಣೆ ತಿಳಿಸಿದೆ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X