Get Updates
Get notified of breaking news, exclusive insights, and must-see stories!

ಮಾನಸಿಕವಾಗಿ ನೊಂದವರಿಗೆ ಶಿವಮೊಗ್ಗದಲ್ಲಿ ‘ಸಮಾಧಾನ್‌’

ಶಿವಮೊಗ್ಗ : ಮಾನಸಿಕ ಸಮಸ್ಯೆಗಳನ್ನು ಎದುರಿಸುವವರಿಗಾಗಿ ಶಿವಮೊಗ್ಗ ನಗರದ ಹೊರವಲಯದಲ್ಲಿ ಒಂದು ಮನೆ ರೆಡಿಯಾಗಿದೆ. ಮನೆ ಹೆಸರು ‘ಸಮಾಧಾನ್‌’. ಬೆಂಗಳೂರಿನಂತಹ ದೊಡ್ಡ ನಗರದ ಹೊರತಾಗಿ ರಾಜ್ಯದಲ್ಲಿ ಏಕೈಕ ಎನಿಸಿಕೊಂಡಿರುವ ಈ ಕೇಂದ್ರದಲ್ಲಿ ಮಾನಸಿಕ ತೊಂದರೆಗಳನ್ನೆದುರಿಸುವವರಿಗೆ ಚಿಕಿತ್ಸೆ ನೀಡಲಾಗುವುದು.

ಮಾನಸಿಕ ತೊಂದರೆ ಇರುವವರು ಹುಚ್ಚರಲ್ಲ. ದಿನನಿತ್ಯದ ವ್ಯವಹಾರಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ನಿರ್ವಹಿಸಿಕೊಂಡು ಹೋಗಬಲ್ಲ , ಆದರೆ ಖಿನ್ನತೆ ಮತ್ತು ಅನಾಸಕ್ತಿಯಿಂದ ಬಳಲುತ್ತಿರುವವರಿಗೆ ಈ ಸಮಾಧಾನ್‌ ಮನೆ ನೆಮ್ಮದಿ ನೀಡಲೆತ್ನಿಸುತ್ತದೆ ಎಂದು ಕೇಂದ್ರದ ಸಲಹಾಕಾರ ಮತ್ತು ಮಾನಸ ನರ್ಸಿಂಗ್‌ ಹೋಂನ ಖ್ಯಾತ ಮನಶ್ಯಾಸ್ತ್ರ ಜ್ಞ ಡಾ. ಅಶೋಕ್‌ ಪೈ ಹೇಳುತ್ತಾರೆ.

ಅನಾಸಕ್ತಿಯ ಸಮಸ್ಯೆ ಹೊಂದಿರುವವರಿಗೆ ಆಸ್ಪತ್ರೆಯಲ್ಲಿ ಅಥವಾ ಕ್ಲಿನಿಕ್‌ಗಳಲ್ಲಿ ಟ್ರೀಟ್‌ಮೆಂಟ್‌ನ ಅಗತ್ಯವಿರುವುದಿಲ್ಲ. ಹೊಸ ಪರಿಸರ ನಿರ್ಮಿಸಿಕೊಡುವುದೂ ಅವರಿಗೆ ಉಪಯುಕ್ತವಾಗುತ್ತದೆ. ಅಲ್ಲದೆ ಮಾನಸಿಕವಾಗಿ ಅಸ್ವಸ್ಥರಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಹೊಂದಿಕೊಂಡು ಬಾಳಬೇಕಾಗುತ್ತದೆ. ಚಿಕಿತ್ಸೆಯ ನಂತರ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ. ಇಂತಹ ಸಂದರ್ಭದಲ್ಲಿ ಸಮಾಧಾನ್‌ ನೆರವಾಗುತ್ತದೆ ಎಂದು ಪೈ ಹೇಳುತ್ತಾರೆ.

ಸಮಾಧಾನ್‌ ಎಂಬ ಮನೆಯಲ್ಲಿ ವಾಸಿಸುವವರು ಕೃಷಿ , ತೋಟಗಾರಿಕೆಯಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಊಟ ತಿಂಡಿ ನಿರ್ವಹಣಾ ಖರ್ಚು ವೆಚ್ಚಗಳು ಎಲ್ಲರಿಗೂ ಹಂಚಿ ಹೋಗುತ್ತದೆ.

ಸಮಾಧಾನ್‌ ಅನ್ನು ಜೂನ್‌ 9ರ ಶನಿವಾರದಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಉದ್ಘಾಟಿಸುತ್ತಾರೆ. ಸದ್ಯಕ್ಕೆ 40 ಮಂದಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಸಮಾಧಾನಕ್ಕಿದೆ. ಸಂಪರ್ಕಿಸಲು ಇಚ್ಛಿಸುವವರು- ಮಾನಸ ನರ್ಸಿಂಗ್‌ ಹೋಂ, ಶಿವಮೊಗ್ಗ - ಫೋನ್‌ - 08182 - 73236 ವಿಳಾಸವನ್ನು ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+