ಭಾರತ- ಜಿಂಬಾಬ್ವೆ ಸೆಣಸಿನಲ್ಲಿಫ್ಲವರ್- ಹರ್ಭಜನ್ ಕೇಂದ್ರಬಿಂದು
ಬುಲಾವಾಯಾ : ಗೆಲ್ಲಲು ಛಲ ತಳೆದು ಮೈದಾನಕ್ಕಿಳಿಯಲಿರುವ ಭಾರತ ಹಾಗೂ ಜಿಂಬಾಬ್ವೆ ನಡುವಣ ಕ್ರಿಕೆಟ್ ಟೆಸ್ಟ್ ಗುರುವಾರದಿಂದ ಆರಂಭವಾಗುತ್ತಿದ್ದು , ಉಭಯ ತಂಡಗಳೂ ಗೆಲುವಿನ ವಿಶ್ವಾಸದಲ್ಲಿವೆ.
1986 ರ ನಂತರ ವಿದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲದಿರುವ ಕಳಂಕವನ್ನು ತೊಳೆದುಕೊಳ್ಳಲು ಜಾನ್ರೈಟ್ ಗಾರುಡಿಯಲ್ಲಿ ಹೊಸ ಹೊಳಪು ಪಡೆದಿರುವ ಭಾರತ ತಂಡ ಸಿದ್ಧವಾಗಿದ್ದರೆ, ಕಳೆದ ವರ್ಷ ಭಾರತದಲ್ಲಿ ನಡೆದ ಏಕೈಕ ಟೆಸ್ಟ್ನಲ್ಲುಂಡ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಉಮೇದಿನಲ್ಲಿ ಜಿಂಬಾಬ್ವೆ ತಂಡವಿದೆ.
ಬೆರಳು ಗಾಯದಿಂದ ನರಳುತ್ತಿದ್ದ ಭಾರತ ತಂಡದ ಉಪನಾಯಕ ರಾಹುಲ್ ದ್ರಾವಿಡ್ ಮೊದಲ ಟೆಸ್ಟ್ನಲ್ಲಿ ಆಡಲು ಸಜ್ಜಾಗಿರುವುದು ಹಾಗೂ ಎರಡು ಅಭ್ಯಾಸ ಪಂದ್ಯಗಳಲ್ಲಿ ನ ಉತ್ತಮ ಸಾಧನೆಯಿಂದಾಗಿ ತಂಡದ ನೈತಿಕ ಸ್ಥೆರ್ಯ ಇಮ್ಮಡಿಸಿದೆ. ಅಂದಹಾಗೆ, ಈ ಟೆಸ್ಟ್ನಲ್ಲಿ ಆಕರ್ಷಣೆ ಯಾರು ? ತೆಂಡೂಲ್ಕರ್, ದ್ರಾವಿಡ್, ಲಕ್ಷಣ್..
ಆ್ಯಂಡಿ ಫ್ಲವರ್- ಹರ್ಭಜನ್ ಉತ್ತಮ ಸಾಧನೆ ಮುಂದುವರಿಸಿಯಾರೆ ?
ಭಾರತದ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನಾಡಿ 169.60 ಸರಾಸರಿಯಲ್ಲಿ 848 ರನ್ ಗಳಿಸಿರುವ ಆ್ಯಂಡಿ ಫ್ಲವರ್ ಪ್ರಸ್ತುತದ ಸರಣಿಯಲ್ಲೂ ಉತ್ತಮ ಸಾಧನೆ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಅವರ ಅತ್ಯಧಿಕ ಟೆಸ್ಟ್ ಸ್ಕೋರ್ 232 ರನ್ ಬಂದಿರುವುದು ಕೂಡ ಭಾರತದ ವಿರುದ್ಧವೇ. ಈ ನಿಟ್ಟಿನಲ್ಲಿ ಫ್ಲವರ್ ಮತ್ತೊಮ್ಮೆ ಭಾರತದ ವಿರುದ್ಧ ಅರಳಿದರೆ ಭಾರತ ಪ್ರಯಾಸಪಡಬೇಕಾಗುವುದರಲ್ಲಿ ಅನುಮಾನವಿಲ್ಲ .
ಭಾರತದ ಭರವಸೆಯ ಸ್ಪಿನ್ನರ್ ಹರ್ಭಜನ್ ಹಾಗೂ ಫ್ಲವರ್ ವಿರುದ್ಧದ ಸೆಣಸು ಕುತೂಹಲ ಕೆರಳಿಸಿದೆ. ಸ್ಪಿನ್ನರ್ಗಳ ವಿರುದ್ಧ ಅದರಲ್ಲೂ ಭಾರತದ ಸ್ಪಿನ್ನಿಗರ ವಿರುದ್ಧ ಫ್ಲವರ್ ದಾಖಲೆ ಉತ್ತಮವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಶ್ರೇಷ್ಠ ಸಾಧನೆ ಮೆರೆದಿರುವ ಹರ್ಭಜನ್ ಜಿಂಬಾಬ್ವೆ ವಿರುದ್ಧವೂ ಯಶಸ್ಸು ಗಳಿಸುವ ವಿಶ್ವಾಸದಲ್ಲಿದ್ದಾರೆ. 3 ಟೆಸ್ಟ್ಗಳಿಂದ 32 ವಿಕೆಟ್ ಕಬಳಿಸಿರುವ ಅವರು ಈ ಸರಣಿಯಲ್ಲಿ ತಮ್ಮ 50 ನೇ ವಿಕೆಟ್ಟನ್ನು ಕಾಣುವ ಆತುರದಲ್ಲಿದ್ದಾರೆ. ಸಿಎಫ್ಎಕ್ಸ್ ಅಕಾಡೆಮಿ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ ಪಡೆದಿರುವ ಆತ್ಮ ವಿಶ್ವಾಸವೂ ಅವರ ಬೆನ್ನಿಗಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications