ಪರಿಸರ ಸ್ನೇಹ ಜೂನ್ 5ರಂದು ಮಾತ್ರವಾ,ಅಲ್ಲವೆನ್ನುತ್ತದೆ ವಿಫ್ರೋ
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳು ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸಿ ಆಂದೋಲನ ಅಭಿಯಾನಗಳನ್ನು ಕಳೆದ ವರ್ಷ ಹಮ್ಮಿಕೊಂಡಿದ್ದವು. ಆದರೆ ಪ್ಲಾಸ್ಟಿಕ್ ಪೀಡೆ ಆ ಜಿಲ್ಲೆಗಳಿಂದ ಕಾಲ್ಕಿತ್ತಿರುವುದಕ್ಕೆ ಸಾಕ್ಷಿ ಕಾಣಿಸುವುದಿಲ್ಲ. ಆಂದೋಲನ ಅಭಿಯಾನಗಳ ಆಚೆಗೆ ನಿಂತು ಮೌನವಾಗಿ ಪರಿಸರ ಸ್ನೇಹಿಗಳಾಗಿರುವ ಸಂಸ್ಥೆಗಳೂ ಮಾಲಿನ್ಯ ನಗರಿ ಬೆಂಗಳೂರಿನಲ್ಲಿ ವೆ ಎನ್ನುವುದು ಖುಷಿಯ ಸಂಗತಿ ಅಲ್ವಾ ?
ಪರಿಸರ ಸ್ನೇಹಿಗಳಾಗಬೇಕಿದ್ರೆ ‘ಮರಗಿಡ ಬೆಳೆಸಿ, ಕಾಡು ಕಡಿಯಬೇಡಿ’ ಎಂದು ಭಾಷಣ ಹೊಡೆಯಬೇಕೆಂದೇ ಇಲ್ಲ ಎನ್ನುವ ಬೆಂಗಳೂರಿನ ‘ಗಿಲ್ಡ್ ಆಫ್ ವುಮನ್ ಅಚೀವರ್ಸ್ (ಜಿಓಡಬ್ಲ್ಯುಎ)’ ಬಟ್ಟೆ ಮತ್ತು ಕಾಗದದ ಲಕೋಟೆಗಳನ್ನು ತಯಾರಿಸಲು ತರಬೇತಿ ನೀಡುತ್ತಾರೆ. ಮಹಿಳೆಯರಿಗೆ ಇದು ಸ್ವ ಉದ್ಯೋಗವೂ ಹೌದು, ಮಾರುಕಟ್ಟೆಯಲ್ಲಿ ಇಂತಹ ಲಕೋಟೆಗಳಿಗೆ ಬೇಡಿಕೆಯೂ ಇದೆ ಎಂದು ಸಂಘದ ಅಧ್ಯಕ್ಷೆ ಛಾಯಾ ಶ್ರೀವಾಸ್ತವ ಹೇಳುತ್ತಾರೆ.
ಪರಿಸರ ದಿನದಂದು ಮಾತ್ರ ಕೆಎಸ್ಆರ್ಟಿಸಿ ಬಸ್ಗಳ ಹೊಗೆ ನಳಿಗೆಯನ್ನು ಪರಿಶೀಲಿಸುವ ಸಾರಿಗೆ ಸಂಸ್ಥೆಯ ಸುದ್ದಿ ಬರುತ್ತಿದ್ದಂತೆಯೇ ಸಿಲಿಕಾನ್ ಸಿಟಿಯ ದಿಗ್ಗಜರೆನಿಸಿದ ವಿಪ್ರೋ ಮತ್ತು ಇನ್ಫೋಸಿಸ್ ಕಂಪೆನಿಗಳು ನಿಸರ್ಗ ಪ್ರೇಮಿಗಳೂ ಹೌದು ಎನ್ನುವ ಸುದ್ದಿ ಬಂದಿದೆ.
ವಿಪ್ರೋ ವಿಶ್ವ ಪರಿಸರ ದಿನಕ್ಕಾಗಿ ಕಾಯುವುದಿಲ್ಲ. ನಿಸರ್ಗ ಉಳಿಸಲು ಕಂಪೆನಿ ಮಾಡುವ ಪ್ರಯತ್ನಗಳು -
- ಹ್ಯಾಲೋಜನ್ ಬಲ್ಬ್ಗಳ ಬದಲಿಗೆ ಕಡಿಮೆ ಶಕ್ತಿ ಖರ್ಚಾಗುವ ಬಲ್ಬ್ಗಳ ಬಳಕೆ.
- ನಾಲ್ಕು ಮಳೆ ನೀರು ಸಂಗ್ರಹಣಾ ವ್ಯವಸ್ಥೆ
- ಪ್ರತಿದಿನ ಎಲ್ಲ ಕಂಪ್ಯೂಟರ್ಗಳನ್ನು ಕೆಲಸವಾದ ತಕ್ಷಣ ಸ್ವಿಚ್ ಆಫ್ ಮಾಡುವುದು
- ಕಂಪ್ಯೂಟರ್ ಜೊತೆ ಬರುವ ಥರ್ಮಾಕೋಲ್ಗಳನ್ನು ಕಂಪ್ಯೂಟರ್ ಕಂಪೆನಿಗಳಿಗೆ ವಾಪಾಸು ಕಳುಹಿಸುವುದು
- ಉಳಿದ ಆಹಾರಗಳನ್ನು ಹಂದಿ ಸಾಕಾಣಿಕಾ ಕೇಂದ್ರಕ್ಕೆ ಕಳುಹಿಸಲಾಗುವುದು, ಕಸದ ಬುಟ್ಟಿಗೆ ಚೆಲ್ಲುವುದಿಲ್ಲ.
- ದಿನಪತ್ರಿಕೆಗಳನ್ನು ಲಕೋಟೆ ತಯಾರಿಕಾ ಸಂಘಟನೆಗಳಿಗೆ ಕೊಡುವುದು.
- ಸರ್ಜಾಪುರದಲ್ಲಿರುವ ಕಂಪೆನಿಯ ಜಾಗದಲ್ಲಿ ಹುಲ್ಲು ಬೆಳೆಸಿ ವರ್ಷಕ್ಕೊಮ್ಮೆ ಅವುಗಳನ್ನು ಕಂಪೋಸ್ಟ್ ಮಾಡುವುದು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications