Get Updates
Get notified of breaking news, exclusive insights, and must-see stories!

ಪ್ರತಿಭಟನೆಯ ಕುಲುಮೆಯಲ್ಲಿ ಕಠ್ಮಂಡು : ಕರ್ಫ್ಯೂ ಜಾರಿ

ಕಠ್ಮಂಡು : ನೇಪಾಳದ ರಾಜಧಾನಿಯಲ್ಲಿ ನೂತನ ದೊರೆ ಜ್ಞಾನೇಂದ್ರ ಕಿರೀಟ ಧರಿಸುತ್ತಿದ್ದಂತೆಯೇ, ಅವರ ವಿರುದ್ಧ ಪ್ರತಿಭಟನೆ- ಹಿಂಸಾಚಾರ ವ್ಯಾಪಕವಾಗಿದ್ದು ಕಠ್ಮಂಡುವಿನಲ್ಲಿ ಕರ್ಫ್ಯೂ ಘೋಷಿಸಲಾಗಿದೆ.

ಸೋಮವಾರ ಸಂಜೆ 4 ರಿಂದ ಮಂಗಳವಾರ ಮುಂಜಾನೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಕಠ್ಮಂಡುವಿನ ಜಿಲ್ಲಾಧಿಕಾರಿ ಘೋಷಿಸಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು , ಗಲಭೆಯಲ್ಲಿ ನಿರತರಾಗಿರುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಗಿದೆ. ಇದಕ್ಕೂ ಮುನ್ನ ಪ್ರತಿಭಟನಕಾರರು ನೂತನ ದೊರೆ ಜ್ಞಾನೇಂದ್ರ, ಪ್ರಧಾನಿ ಜಿ.ಪಿ. ಕೊಯಿರಾಲ ಮತ್ತಿತರರ ವಿರುದ್ಧ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಕೂಗಿದರು. ನೂರಾರು ದ್ವಿಚಕ್ರ ವಾಹನಗಳ ಸವಾರರು ನಗರದಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿದರು.

ಪೊಲೀಸರೊಂದಿಗೆ ಸೈನಿಕರು ಕೂಡ ಕಾನೂನು ಮತ್ತು ಸುವ್ಯವಸ್ಥೆ ಕಾರ್ಯದಲ್ಲಿ ತೊಡಗಿದ್ದು , ಪ್ರಮುಖ ರಸ್ತೆಗಳ ತಿರುವುಗಳನ್ನು ಸೇನೆ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ದೊರೆ ಜ್ಞಾನೇಂದ್ರ ಅವರ ಅರಮಮನೆಯ ಮುಂಭಾಗ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಯತ್ನಿಸಿದಾಗ, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದ ಘರ್ಷಣೆ ಉಂಟಾಯಿತು. ಥಾಮೆಲ್‌ ಷಾಪಿಂಗ್‌ ಕೇಂದ್ರದ ಬಳಿ ಪೊಲೀಸರು ಚಲಾಯಿಸಿದ ಗೋಲಿಬಾರ್‌ನಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ.

ಮಾಧ್ಯಮದವರಿಗೆ ಭಯ, ಭಾರತಿಯರಿಗೂ ಅಭದ್ರತೆ

ಕಠ್ಮಂಡುವಿನ ಮಾಧ್ಯಮ ಕೇಂದ್ರಗಳ ಮಂದಿ, ಅದರಲ್ಲೂ ವಿದೇಶಿ ಮಾಧ್ಯಮ ಪ್ರತಿನಿಧಿಗಳು ರಕ್ಷಣೆಯಿಲ್ಲದೆ ಕಂಗಾಲಾಗಿದ್ದಾರೆ. ಸುದ್ದಿ ಸಂಗ್ರಹಣೆಯಲ್ಲಿ ತೊಡಗಿದ್ದ ವರದಿಗಾರರ ಮೇಲೆ ದಾಳಿ ನಡೆದಿರುವ ವರದಿಗಳು ಬಂದಿವೆ. ಈ ನಡುವೆ ಕಠ್ಮಂಡುವಿನಲ್ಲಿನ ಭಾರತೀಯ ಕುಟುಂಬಗಳು ಕೂಡ ಅಭದ್ರತೆಯೆದುರಿಸುತ್ತಿವೆ ಎನ್ನಲಾಗಿದೆ.
ಕಠ್ಮಂಡುವಿನಲ್ಲಿ ಸಂಭವಿಸಿರುವ ಹಿಂಸಾಚಾರದಲ್ಲಿ ಕೆಲವು ಮಂದಿ ಜೀವ ಕಳೆದುಕೊಂಡಿರುವ ಶಂಕೆಯೂ ಇದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+