‘ನೀರಾ’ ಕ್ಕೆ ಅನುಮತಿ ಕುರಿತುಪರಿಶೀಲನೆ : ಕೃಷ್ಣ ಭರವಸೆ
ಬೆಂಗಳೂರು : ಹಾಸನದ ಎಂಟು ಗ್ರಾಮಗಳಲ್ಲಿ ಮತ್ತು ಚಿಕ್ಕ ಮಗಳೂರಿನ ಬೇಲೂರಿನಲ್ಲಿ ಅಬ್ಕಾರಿ ಸಿಬ್ಬಂದಿಗಳು ನೀರಾ ಮಡಕೆಗಳನ್ನು ಒಡೆದು ಹಾಕಿದ ವರದಿಗಳು ಬರುತ್ತಿದ್ದಂತೆ, ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನೀರಾ ಇಳಿಸಲು ರೈತರಿಗೆ ಅನುಮತಿ ನೀಡುವ ವಿಷಯವನ್ನು ಪರಿಶೀಲಿಸಲಾಗುವುದು ಎಂದು ತುಂಬು ಭರವಸೆ ಇತ್ತಿದ್ದಾರೆ.
ನೀರಾ ಇಳಿಸಿದಲ್ಲಿ ತೆಂಗಿನ ಮರಗಳಿಗೆ ಬರುವ ನುಸಿ ರೋಗವನ್ನು ನಿಯಂತ್ರಿಸಲಾಗುವುದು ಎಂಬ ಬಗೆಗಿನ ವೈಜ್ಞಾನಿಕ ವರದಿ ತಮ್ಮ ಮೇಜು ತಲುಪಿದ ನಂತರವಷ್ಟೇ ನೀರಾ ಇಳಿಸಲು ಅನುಮತಿ ನೀಡಲು ಸಾಧ್ಯ ಎಂಬ ಷರತ್ತನ್ನು ಕೃಷ್ಣ ಮುಂದೊಡ್ಡಿದ್ದಾರೆ.
ಈ ನಡುವೆ ಅಬ್ಕಾರಿ ಸಿಬ್ಬಂದಿ ಮತ್ತು ರೈತರ ನಡುವಿನ ಜಟಾಪಟಿ ಮುಂದುವರೆಯುತ್ತಲೇ ಇದೆ. ಅರಸೀಕೆರೆ ತಾಲ್ಲೂಕಿನ 8 ಗ್ರಾಮಗಳ ತೆಂಗಿನ ತೋಟದ ಮೇಲೆ ಭಾನುವಾರ ದಾಳಿ ಮಾಡಿದ ಅಬ್ಕಾರಿ ಸಿಬ್ಬಂದಿ 500 ನೀರಾ ಮಡಕೆಗಳನ್ನು ನಾಶ ಮಾಡಿದ್ದು, 10 ಜನರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಬ್ಯಾಡರ ಹಳ್ಳಿಯ ಗುರುಸಿದ್ಧಪ್ಪ ಎಂಬವರನ್ನು ಬಂಧಿಸಲಾಗಿದೆ.
ಬೆಂಡಗೊಂಡನ ಹಳ್ಳಿ, ಕಿಕ್ಕೂರು, ಹಿರಿನಾಯ್ಕನ ಹಳ್ಳಿ, ಕೋರನ ಹಳ್ಳಿ ಕೊಪ್ಪಲು ಹರಿಹರಪುರದ ತೆಂಗಿನ ತೋಟಗಳಲ್ಲಿ ನೀರಾ ಮಡಕೆಗಳನ್ನು ಒಡೆದು ಹಾಕಲಾಗಿದೆ. ಚಿಕ್ಕಮಗಳೂರಿನ ಹಳೇ ಬೀಡಿನ ಸಮೀಪ ಗಂಗೂರಿನಲ್ಲಿಯೂ ಭಾನುವಾರದಂದು ನೀರಾ ವಿರುದ್ಧದ ಕಾರ್ಯಚಾರಣೆಗೆ ಸುಮಾರು 30 ಮಡಕೆಗಳು ನಾಶವಾಗಿದ್ದು, ಬೊಮ್ಮ ಗೌಡ ಮತ್ತು ಪಾಪಣ್ಣ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಅಬ್ಕಾರಿ ಸಿಬ್ಬಂದಿ ನೀರಾ ವಿರುದ್ಧ ಕಾರ್ಯಾಚರಣೆ ಯನು ್ನ ತೀವ್ರಗೊಳಿಸಿದಂತೆಲ್ಲಾ ತೆಂಗು ಬೆಳೆಗಾರರು ನೀರಾ ಚಳುವಳಿಯನ್ನು ತೀವ್ರಗೊಳಿಸುತ್ತಲೇ ಬಂದಿದ್ದಾರೆ. ಕೇಸು, ಮೊಕದ್ದಮೆ, ಬಂಧನಗಳಿಗೆಲ್ಲಾ ಜಗ್ಗದ ರೈತರು ರಾಜ್ಯ ರೈತ ಸಂಘಟನೆಯಾಂದಿಗೆ ನೀರಾ ಇಳಿಸಲು ಅನುಮತಿ ನೀಡುವಂತೆ ಹೋರಾಡುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿರುವುದು ತೆಂಗು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications