Get Updates
Get notified of breaking news, exclusive insights, and must-see stories!

ಮಹಾವೀರ ಜೈನ್‌ ಕೇಂದ್ರದಿಂದ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆ

ಬೆಂಗಳೂರು : ಹೃದಯ ಬಡಿತ ಏಕಾಏಕಿ ನಿಂತು ಸಾವು ಸಂಭವಿಸುವುದನ್ನು ತಡೆಯುವ ಪುಟ್ಟ ಯಂತ್ರವೊಂದನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯನ್ನು ನಗರದ ಭಗವಾನ್‌ ಮಹಾವೀರ ಜೈನ್‌ ಕೇಂದ್ರ ಯಶಸ್ವಿಯಾಗಿ ನೆರವೇರಿಸಿದೆ. ಇದು ತೀರಾ ಅಪರೂಪದ ಶಸ್ತ್ರ ಚಿಕಿತ್ಸೆಯಾಗಿದ್ದು , ಈವರೆಗೆ ದೇಶದಲ್ಲಿ ಈ ಬಗೆಯ ಸುಮಾರು 120 ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹಠಾತ್‌ ಹೃದಯ ನಿಲ್ಲುವುದರಿಂದ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಸಾಯುತ್ತಿದ್ದಾರೆ. ಈ ರೀತಿಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ಇಂಪ್ಲಾಂಟೇಬಲ್‌ ಕಾರ್ಡಿಯಾ ಡಿಫಿಬ್ರಿಲೇಟರ್ಸ್‌ (ಐಸಿಡಿ) ಅಳವಡಿಸಲಾಗುವುದು. ಹೃದಯ ಬಡಿತದ ವ್ಯತ್ಯಾಸಗಳನ್ನು ತಕ್ಷಣ ಗ್ರಹಿಸುವ ಈ ಯಂತ್ರ, ಅ ವ್ಯತ್ಯಾಸಗಳನ್ನು ತಕ್ಷಣ ಸರಿಪಡಿಸುತ್ತಿದೆ. ಈ ಕುರಿತು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಕತ್ತಿನ ಎಲುಬಿನ ಬಳಿ ಸುಮಾರು ನಾಲ್ಕು ಅಂಗುಲ ಕುಯ್ದು , 5 ಮಿಮೀ ಅಳತೆಯ ತೆಳುವಾದ ತಂತಿಯನ್ನು ಒಳಗೆ ಸೇರಿಸಿ ಅದರ ತುದಿಯನ್ನು ಹೃದಯದಲ್ಲಿ ಅಳವಡಿಸಲಾಗುವುದು. ಮತ್ತೊಂದು ತುದಿಯ ತಂತಿಯನ್ನು ಐಸಿಡಿಗೆ ಜೋಡಿಸಲಾಗುವುದು. ಐಸಿಡಿಯ ಕಾರ್ಯ ನಿರ್ವಹಣೆ ಪರಿಶೀಲಿಸಿದ ನಂತರ ಕತ್ತರಿಸಿದ ಭಾಗವನ್ನು ಹೊಲಿಗೆ ಹಾಕಿ ಮುಚ್ಚಲಾಗುವುದು ಎಂದು ಐಸಿಡಿ ಅಳವಡಿಸುವ ಶಸ್ತ್ರಚಿಕಿತ್ಸೆ ಯ ಬಗೆಗೆ ಆಸ್ಪತ್ರೆಯ ಪ್ರಕಟಣೆ ವಿವರಗಳನ್ನು ತಿಳಿಸಿದೆ. ಅಂದಹಾಗೆ, ಭಗವಾನ್‌ ಮಹಾವೀರ ಜೈನ್‌ ಹೃದಯ ಕೇಂದ್ರ ನಡೆಸಿರುವ ಶಸ್ತ್ರಚಿಕಿತ್ಸೆ ಸಾಹಸದಲ್ಲಿ ವೈದ್ಯರುಗಳಾದ ಡಾ.ಎಸ್‌. ಎಸ್‌. ರಮೇಶ್‌, ಡಾ. ಆರ್‌. ಕೇಶವ್‌ ಹಾಗೂ ಡಾ. ಗಣೇಶ ನಾಯಕ್‌ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+