ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಡಿಕೆ ಕದಿಯುವವರನ್ನು ಹದ್ದು ಬಸ್ತಿನಲ್ಲಿಡಲುವಿಶೇಷ ತನಿಖಾ ದಳ
ಶಿವಮೊಗ್ಗ : ಅಡಿಕೆ ಬೆಳೆಯುವ ಪ್ರದೇಶದಲ್ಲಿ ಕಳ್ಳತನದ ವರದಿಗಳು ಹೆಚ್ಚುತ್ತಿದ್ದು, ಇದರ ಕುರಿತು ಸಮಗ್ರ ತನಿಖೆಗೆ ವಿಶೇಷ ದಳವೊಂದನ್ನು ನೇಮಿಸಲು ನಿರ್ಧರಿಸಲಾಗಿ ಎಂದು ಗೃಹಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ವಿಶೇಷ ದಳವು ಅಡಿಕೆ ಕಳ್ಳತನದ ಹಿನ್ನೆಲೆ, ಕಾರಣ ಮತ್ತು ಪರಿಹಾರಗಳ ಬಗ್ಗೆ ವರದಿ ಸಲ್ಲಿಸಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಖರ್ಗೆ ಹೇಳಿದರು.
ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿದ್ದ ಸಂದರ್ಭದಲ್ಲಿ ಆರಂಭವಾದ ಈ ಕಳ್ಳತನದ ವರದಿಗಳು ಅಡಿಕೆ ಬೆಲೆ ಕುಸಿದಾಗ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಅಡಿಕೆ ಮಾರುಕಟ್ಟೆ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತನಿಖಾ ದಳ ವಿಶೇಷ ಪಾತ್ರ ವಹಿಸಲಿದೆ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
(ಇನ್ಪೋವಾರ್ತೆ)
Comments
Story first published: Saturday, June 2, 2001, 5:30 [IST]