ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೂರು : ಆಯತಪ್ಪಿದ ಮಾವಿನಕಾಯಿ ಸಾಗಣೆ ಲಾರಿ,8 ಸಾವು

By Staff
|
Google Oneindia Kannada News

ಕೋಲಾರ : ಕೋಲಾರದಿಂದ ಮಾಲೂರಿಗೆ ಶುಕ್ರವಾರ ರಾತ್ರಿ ಮಾವಿನಕಾಯಿ ತುಂಬಿಕೊಂಡು ಹೋಗುತ್ತಿದ್ದ ಲಾರಿ ಉರುಳಿಬಿದ್ದು ಮಾವಿನಕಾಯಿ ರಾಶಿಯ ಮೇಲೆ ಕುಳಿತಿದ್ದ 8 ಮಂದಿ ಸ್ಥಳದಲ್ಲಿಯೇ ನಿಧನರಾಗಿದ್ದು , ಇತರ 14 ಮಂದಿ ಗಾಯಗೊಂಡಿದ್ದಾರೆ. ಮಾಲೂರು ಹೊರ ವಲಯದ ಚಿಕ್ಕ ಕಡತೂರು ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

ಮೃತಪಟ್ಟ ಎಲ್ಲರೂ ಕೂಲಿಯಾಳುಗಳಾಗಿದ್ದು , ಅವರನ್ನು - ಚಿನ್ನಮ್ಮ ಕೋಂ ಹನುಮಂತಪ್ಪ (45), ರಾಮಮೂರ್ತಿ (11), ನಾಗರಾಜ್‌ (10), ಶಂಕ್ರಮ್ಮ (30), ಕೆಂಚಮ್ಮ (16), ರಾಮಪ್ಪ (35), ನಾರಾಯಣಮ್ಮ (45) ಹಾಗೂ ಚಿನ್ನಮ್ಮ ಕೋಂ ರಾಮಪ್ಪ (45) ಎಂದು ಗುರ್ತಿಸಲಾಗಿದೆ.

ಗಾಯಾಳುಗಳು ಮಾಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಪಾಪಮ್ಮ (40) ಎಂಬ ಮಹಿಳೆಯನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಲೂರಿನ ಶಾಸಕ ಎ. ನಾಗರಾಜು ಸತ್ತವರ ಕುಟುಂಬದವರಿಗೆ ತಲಾ 1 ಸಾವಿರ ರುಪಾಯಿ ಹಾಗೂ ಗಾಯಗೊಂಡವರಿಗೆ 500 ರುಪಾಯಿ ನೀಡಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X