ಮಳೆರಾಯನಿಗಿದು ಗೊತ್ತಿದೆಯಾ, ಜೂನ್ ಬಂದೇ ಬಿಟ್ಟಿದೆ !
ಬೆಂಗಳೂರು : ಪ್ರೆೃಮರಿ ಕ್ಲಾಸುಗಳಲ್ಲಿ ವರ್ಷಕ್ಕೆ ಕಾಲಗಳೆಷ್ಟು ಎಂದು ಉರು ಹೊಡೆಯುತ್ತಿದ್ದುದು ನೆನಪಿದೆಯಷ್ಟೆ . ಆ ಲೆಕ್ಕ ಪ್ರಕಾರ ಹೋದರೆ ಜೂನ್ ಒಂದಕ್ಕೆ ಮಳೆಗಾಲ ಆರಂಭವಾಗಬೇಕು. ಕರಾರುವಾಕ್ಕಾಗಿ ಮೇ 31ರಂದು ಬೇಸಿಗೆಯ ಬಾಗಿಲಿಗೆ ಬೀಗ ಜಡಿಯಬೇಕು.
ಆದರೆ ಹೇಗಾಗಿದೆ ನೋಡಿ. ಚಂಡಮಾರುತವೋ, ಇನ್ನೊಂದೋ ಕಾರಣ ಹೇಳಿಕೊಂಡು ಮಳೆ ಕರಾವಳಿಯನ್ನು ತಣ್ಣಗಾಗಿಸಿದೆ. ಉತ್ತರ ಕರ್ನಾಟಕ ಮಾತ್ರ ಎಂದಿನಂತೆ ಸೋನೆ ಮಳೆಗೆ ಕಾತರಿಸಿ, ಕಾದು ಬಾಯಾರಿದೆ. ಕಾಯುವಿಕೆಗೆ ಕೊನೆಯುಂಟಾ... ನಂಬಿಕೆಯನ್ನೆ ಗಟ್ಟಿಯಾಗಿ ತಬ್ಬಿಕೊಂಡು ಅವರು ಮಳೆಗೆ ಕಾಯುತ್ತಿದ್ದಾರೆ. ಮಳೆರಾಯನಿಗಿದು ಗೊತ್ತಿದೆಯಾ, ಜೂನ್ ಬಂದೇ ಬಿಟ್ಟಿದೆ !
ಜೂನ್ ನಾಲ್ಕಕ್ಕೆ ಮಾನ್ಸೂನ್ ಬಿಜಯಂಗೈಯ್ಯಲಿದೆ
ಮಳೆ ಮಹಾಶಯ ಬರುವ ದಾರಿಯನ್ನು ಯಾವ ಔಟ್ ಲೈನ್ನೊಳಗೂ ಸೇರಿಸಿಕೊಳ್ಳಲಾಗದೇ ಪರದಾಡುವ ನಾವು, ಚುಕ್ಕಿಗಳನ್ನೆಣಿಸಿ, ಗ್ರಹಗತಿಗಳ ತಾಳೆ ಹಾಕಿ ಜೂನ್ ಒಂದನೇ ತಾರೀಕಿಗೇ ಗಂಗಾವತರಣ ಎಂದು ಬರೆಯುವ ಜೋಯಿಸರು, ಮತ್ತೆ ಕ್ಯಾಲೆಂಡರಿನಲ್ಲಿ ಯಾವುದೋ ಮೂಲೆಯಲ್ಲಿ ಬರೆದಿಟ್ಟಿರುವ ಲೆಕ್ಕಾಚಾರದ ಮೇಲೆ ಬಿತ್ತನೆಗೆಂದು ಬೀಜ ನೆನೆಸುವ ರೈತ - ಎಲ್ಲರೂ ಮಳೆಗಾಲ ಬರುತ್ತಿರುವುದನ್ನು ಎದುರುನೋಡುತ್ತಿದ್ದಾರೆ.
ಈ ಕಾಯುವಿಕೆಯ ನಡುವೆ ‘ರಾಜ್ಯದ ಕೆಲವೆಡೆ ಹಗುರದಿಂದ ಭಾರೀ ಮಳೆ, ಬೆಂಗಳೂರಿನ ಸುತ್ತ ಮುತ್ತ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ’ ಎಂದು ಆಕಾಶವಾಣಿಯಲ್ಲಿ ಕಳೆದ ಕೆಲ ದಿನಗಳಿಂದ ಉದ್ಘೋಷಕಿ ಉಲಿಯುತ್ತಲೇ ಇದ್ದಾಳೆ. ಸೋಮವಾರದ ಹೊತ್ತಿಗೆ ಬೆಂಗಳೂರು ತಂಪಾಗಿ ಮತ್ತೆ ‘ ಕೂಲ್ ಸಿಟಿ’ ಯಾಗಲಿದೆ. ಜೂನ್ ನಾಲ್ಕಕ್ಕೆ ಮಾನ್ಸೂನ್ ಬಿಜಯಂಗೈಯ್ಯಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ.
ಮಳೆಯ ಮನಸೇನಪ್ಪಾ ?
ಆದರೆ ಮಳೆಗೆ ಇದೆಲ್ಲಾ ಕೇಳಿಸುತ್ತಾ .. ಈ ಎಲ್ಲ ಮುನ್ನುಡಿಗಳನ್ನು ಕೇಳಿಕೊಂಡು ಮಳೆ ಸುರಿಯುತ್ತದಾ ಅಥವಾ ಮಳೆಯ ಮನಸು ತಿಳಿದು ಇವರೆಲ್ಲಾ ಲೆಕ್ಕ ಬರೆಯುತ್ತಾರಾ ?
ಏನೇ ಆಗಲಿ, ಬೋರ್ವೆಲ್ಗಳ ಮುಂದೆ ಸಾಲುಗಟ್ಟಿ ನಿಂತಿರುವ ಹೆಂಗಸರು, ಖಾಲಿ ಕೊಡಪಾನಗಳು, ಬಿರುಕು ಬಿಟ್ಟಿರುವ ಹೊಲ ಗದ್ದೆಗಳು, ಒಣಗುತ್ತಿರುವ ಪೈರುಗಳ ಬಗ್ಗೆ ಮಾತ್ರ ಮಳೆ ದೇವರಿಗೆ ಮುನಿಸು ಬಾರದಿರಲಿ. ಎಲ್ಲರ ಲೆಕ್ಕಾಚಾರದ ಗೆರೆಗಳ ನಡುವಿನ ಖಾಲಿಯಾಳಗೆ ತೂರಿಕೊಂಡು ಮಳೆ ಉತ್ತರ , ದಕ್ಷಿಣ ಕರ್ನಾಟಕದವರನ್ನು ತೊಯ್ಯಿಸಲಿ. ಎಲ್ಲರೆದೆಗಳೂ ಹಸಿರಾಗಲಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications