ಯಶವಂತಪುರ- ಜಯನಗರಫ್ಲೈಓವರ್ ಯೋಜನೆ ಕ್ಯಾನ್ಸಲ್
ಬೆಂಗಳೂರು : ಮೇಲ್ಮಟ್ಟದ ಹಗುರ ರೈಲು ಯೋಜನೆ ಜಾರಿಗೆ ತರಬೇಕೆಂಬ ಯೋಚನೆಗೆ ಅಡ್ಡಿ ಬರುತ್ತದೆಂಬ ಕಾರಣಕ್ಕೆ ಯಶವಂತಪುರ- ಜಯನಗರ ನಡುವಿನ 250 ಕೋಟಿ ರುಪಾಯಿ ವೆಚ್ಚದ ಫ್ಲೈಓವರ್ ನಿರ್ಮಾಣದ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಜಯನಗರ 4ನೇ ಬ್ಲಾಕ್ನಿಂದ ಶುರುವಾಗಿ ಆರ್.ವಿ.ಟೀಚರ್ಸ್ ಕಾಲೇಜು, ಜೆ.ಸಿ.ರಸ್ತೆ, ಮಿಷನ್ ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಪ್ಲಾಟ್ಫಾರಂ ರಸತೆ, ಸಂಪಿಗೆ ರಸ್ತೆ ಮೂಲಕ ತುಮಕೂರು ರಸ್ತೆಯನ್ನು ಸಂಪರ್ಕಿಸುವ ಉದ್ದನೆಯ ಫ್ಲೈ ಓವರ್ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಯೋಜನೆಯ ಸಾಧ್ಯತಾ ವರದಿ ಸಿದ್ಧಪಡಿಸಲು 50 ಲಕ್ಷ ರುಪಾಯಿ ಸುರಿಯಲಾಗಿತ್ತು.
ಈ ಯೋಜನೆ ಕೈಬಿಡಲು ಮತ್ತೊಂದು ಕಾರಣವನ್ನೂ ಸರ್ಕಾರ ಕೊಟ್ಟಿದೆ. ಕರ್ನಾಟಕ ರಸ್ತೆ ನಿರ್ಮಾಣ ನಿಗಮ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕಿಸಲು 22 ಮಿನಿ ಫ್ಲೈ ೕವರ್ಗಳನ್ನು ನಿರ್ಮಿಸಲಿದೆ. ನಗರಕ್ಕೆ ಉದ್ದದ ಫ್ಲೈ ಓವರ್ ಒಗ್ಗುವುದಿಲ್ಲ ಎಂದು ನಿಗಮ ಹೇಳಿರುವ ಕಾರಣಕ್ಕೆ ಯಶವಂತಪುರ- ಜಯನಗರ ಫ್ಲೈಓವರ್ ಯೋಜನೆಯನ್ನು ಕೈಬಿಡಲಾಗಿದೆ. ಜೊತೆಗೆ ಈ ಯೋಜನೆಯ ಜಾರಿಗೆ ಸಂಪನ್ಮೂಲದ ಕೊರತೆಯೂ ಇದೆಯಂತೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications