Get Updates
Get notified of breaking news, exclusive insights, and must-see stories!

ವಿದ್ವಾನ್‌ ಎನ್‌.ರಂಗನಾಥ ಶರ್ಮರಿಗೆಸೇಡಿಯಾಪು ಪ್ರಶಸ್ತಿ

ವಿಟ್ಲ : ಬೆಂಗಳೂರಿನ ಕನ್ನಡ- ಸಂಸ್ಕೃತ ಭಾಷಾ ವಿದ್ವಾಂಸ ಎನ್‌.ರಂಗನಾಥ ಶರ್ಮ ಅವರು ಈ ವರ್ಷದ ಸೇಡಿಯಾಪು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇಲ್ಲಿನ ಪದವಿಪೂರ್ವ ಕಾಲೇಜಿನಲ್ಲಿ ಜೂನ್‌ 8ರಂದು ನಡೆಯಲಿರುವ ಸೇಡಿಯಾಪು ಕೃಷ್ಣ ಭಟ್‌ ಅವರ ಜನ್ಮ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ, ರಂಗನಾಥ ಶರ್ಮರಿಗೆ ಸೇಡಿಯಾಪು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸೇಡಿಯಾಪು ಕೃಷ್ಣ ಭಟ್‌ ಜನ್ಮ ಶತಮಾನೋತ್ಸವ ಕೇಂದ್ರ ಸಮಿತಿಯ ಉಡುಪಿ ಕಾರ್ಯಾಧ್ಯಕ್ಷ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕವಿ, ವಿಮರ್ಶಕ, ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್‌ ಅವರ ಜನ್ಮ ಶತಮಾನೋತ್ಸವವು ವಿಟ್ಲದಲ್ಲಿ ಜೂನ್‌ 8ರಂದು ಉದ್ಘಾಟನೆಯಾಗಿ, 2002ನೇ ಜೂನ್‌ 8ಕ್ಕೆ ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ಸಮಾರೋಪಗೊಳ್ಳಲಿದೆ. ವಿವಿಧ ಕಾರ್ಯಕ್ರಮಗಳೊಡನೆ ದೇಶಾದ್ಯಂತ ಈ ಉತ್ಸವ ನಡೆಯಲಿದೆ.

ಡಾ.ವೀರೇಂದ್ರ ಹೆಗಡೆ ಸಮಾರಂಭ ಉದ್ಘಾಟಿಸುವರು. ಸೇಡಿಯಾಪು ಸ್ಮಾರಕ ಕುರಿತಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌.ಜೆ.ಲಕ್ಕಪ್ಪ ಗೌಡ ವಿಶೇಷ ಉಪನ್ಯಾಸ ಮಾಡುವರು. ಇದೇ ಸಂದರ್ಭದಲ್ಲಿ ಡಾ.ಪಾದೇಕಲ್ಲು ವಿಷ್ಣುಭಟ್‌ ಬರೆದಿರುವ ‘ಸೇಡಿಯಾಪು’ ಕೃತಿಯನ್ನು ಮಂಗಳೂರು ವಿವಿ ಕುಲಪತಿ ಡಾ.ಎಸ್‌.ಗೋಪಾಲ್‌ ಬಿಡುಗಡೆ ಮಾಡುವರು. ನಂತರ ಶತಾವಧಾನಿ ಆರ್‌.ಗಣೇಶ್‌, ‘ಪಂಡಿತ ಪರಮೇಷ್ಠಿಗಳು- ರಸ ಪ್ರಸಂಗಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಡುವರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಉಂಟು.

(ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+