ಕ್ರೀಡಾ ಸಚಿವೆ ಉಮಾಭಾರತಿ ಕೆಂಗಣ್ಣು ! ತಲೆಬಿಸಿಯಲ್ಲಿ ಬಿಸಿಸಿಐ
ನವದೆಹಲಿ : ಭಾರತ- ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಪ್ರಾರಂಭವಾಗಿದೆ.
ಏಷ್ಯಾ ಟೆಸ್ಟ್ ಚಾಂಪಿಯನ್ಷಿಪ್ ಪ್ರಯುಕ್ತ , ಪಾಕಿಸ್ತಾನ ನೆಲದಲ್ಲಿ 12 ವರ್ಷಗಳ ನಂತರ ಆತಿಥೇಯರ ವಿರುದ್ಧ ಟೆಸ್ಟ್ ಪಂದ್ಯವಾಡಲು ಸಿದ್ಧ ಎಂದು ಬಿಸಿಸಿಐ ಘೋಷಿಸಿದ 24 ಗಂಟೆಗಳೊಳಗಾಗಿ (ಮಂಗಳವಾರ)‘ ಬಿಸಿಸಿಐನದು ಅತಿಯಾಯಿತು’ ಎಂದು ಕೇಂದ್ರ ಕ್ರೀಡಾಸಚಿವೆ ಉಮಾ ಭಾರತಿ ಕೆಂಡಾ ಮಂಡಲವಾಗಿದ್ದಾರೆ. ಇದರಿಂದಾಗಿ ಬಿಸಿಸಿಐ ಯಾವ ತೀರ್ಮಾನಕ್ಕೂ ಬರಲಾಗದೆ ಗೊಂದಲಕ್ಕೆ ಬಿದ್ದಿದೆ.
ನಮಗೀಗ ಏನು ಮಾಡಬೇಕೆನ್ನುವುದೇ ತೋಚುತ್ತಿಲ್ಲ . ಪಾಕಿಸ್ತಾನದಲ್ಲಿ ಆಡುವ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಬಿಸಿಸಿಐನ ಹಿರಿಯ ಅಧಿಕಾರಿಯಾಬ್ಬರು. ನಿಯಮಗಳ ಪ್ರಕಾರ- ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವೆ ಸೆಪ್ಟಂಬರ್ 13 ರಿಂದ 17 ರವರೆಗೆ ಲಾಹೋರ್ ಅಥವಾ ಕರಾಚಿಯಲ್ಲಿ ಪಂದ್ಯ ನಡೆಯಬೇಕಾಗಿತ್ತು . ಈ ಕುರಿತಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ನೊಂದಿಗೆ ಒಪ್ಪಂದಕ್ಕೂ ಬಿಸಿಸಿಐ ಬಂದಿದೆ. ಆದರೆ, ಬಿಸಿಸಿಐ ನಿರ್ಣಯದ ವಿರುದ್ಧವೀಗ ಉಮಾಭಾರತಿ ಗನ್ನು ಹಿಡಿದಿದ್ದಾರೆ.
ಬಿಸಿಸಿಐ ಸ್ವೇಚ್ಛಾಚಾರ ಅತಿಯಾಯಿತೆ ? : ಆಸ್ಟ್ರೇಲಿಯಾದ ಒಳಾಂಗಣ ಕ್ರಿಕೆಟ್ ಬದಲು ಪಾಕಿಸ್ತಾನದಲ್ಲಿ ಟೆಸ್ಟ್ ಆಡುವುದಾಗಿ ಸೋಮವಾರ ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಪ್ರಕಟಿಸಿದ್ದರು. ಈ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾಸಚಿವೆ ಉಮಾ ಭಾರತಿ- ‘ಇಷ್ಟೊಂದು ಸ್ವಾತಂತ್ರ್ಯವನ್ನು ಬಿಸಿಸಿಗೆ ಕೊಟ್ಟವರ್ಯಾರು ? ಆಟವಾಡಲು ಒಪ್ಪಿಗೆ ಪಡೆಯುವ ಮುನ್ನ ಕೇಂದ್ರ ಕ್ರೀಡಾ ಸಚಿವಾಲಯದ ಒಪ್ಪಿಗೆ ಪಡೆಯಬೇಕು. ಆ ಪ್ರಸ್ತಾವನೆ ವಿದೇಶಾಂಗ ಸಚಿವಾಲಯದ ಒಪ್ಪಿಗೆಯನ್ನೂ ಪಡೆಯಬೇಕು. ಇದ್ಯಾವುದೂ ಇಲ್ಲದೆ ನೇರವಾಗಿ ಆಟವಾಡುತ್ತೇವೆಂದು ಪ್ರಕಟಿಸಲು ಬಿಸಿಸಿಐಗೆ ಸ್ವಾತಂತ್ರ್ಯ ಕೊಟ್ಟವರ್ಯಾರು ?’ ಎನ್ನುತ್ತಾರೆ.
ಸಚಿವರ ಕೋಪದಿಂದ ಬಿಸಿಸಿಐ ಕಂಗಾಲಾಗಿರುವುದಂತೂ ನಿಜ. ಕೈ ಸುಟ್ಟುಕೊಳ್ಳಲು ಇಷ್ಟಪಡದ ಬಿಸಿಸಿಐ ಅಧಿಕಾರಿಗಳು, ಎಸಿಸಿಯಾಂದಿಗೆ ಒಪ್ಪಂದಕ್ಕೆ ಬಂದಿರುವುದರಿಂದ ಮಾತ್ರ ನಾವು ಆಟವಾಡಲು ಒಪ್ಪಿಗೆ ನೀಡಬೇಕಾಯಿತು ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಅಭ್ಯಂತರವಿಲ್ಲವೆನ್ನುವ ಇಂಗಿತವನ್ನು ಸೋಮವಾರವಷ್ಟೇ ವಿದೇಂಶಾಂಗ ಸಚಿವ ಜಸ್ವಂತ್ ಸಿಂಗ್ ವ್ಯಕ್ತಪಡಿಸಿದ್ದರು. ಪ್ರಸ್ತುತದ ಏಷ್ಯಾ ಕಪ್- ಭಾರತ, ಪಾಕ್ ಮಾತ್ರವಲ್ಲದೆ ಶ್ರೀಲಂಕಾ, ಬಾಂಗ್ಲಾ ದೇಶಗಳು ಕೂಡ ಭಾಗವಹಿಸುವ ಚಾಂಪಿಯನ್ಷಿಪ್ ಆಗಿದೆ ಎನ್ನುವ ವಾದವನ್ನು ಕೂಡ ಬಿಸಿಸಿಐ ಅಧಿಕಾರಿಗಳು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಇವೆಲ್ಲವುಗಳ ಹೊರತಾಗಿ, ಉಭಯ ರಾಷ್ಟ್ರಗಳು ಕ್ರಿಕೆಟ್ ಆಡುವ ವಿಷಯವನ್ನು ಬಿಸಿಸಿಐ ಹಾಗೂ ಕೇಂದ್ರ ಸರ್ಕಾರ ಬೇರೆ ಬೇರೆ ಕಾರಣಗಳಿಗಾಗಿ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿವೆ ಎನ್ನುವುದನ್ನೂ ಮರೆಯಬಾರದು. ಇದರಿಂದಾಗಿ ಸೊರಗುತ್ತಿರುವುದು ಇವರಿಬ್ಬರೂ ಅಲ್ಲ - ಕ್ರಿಕೆಟ್.
(ಎಎಫ್ಪಿ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications