ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ ನಾಗೇಶ್‌ ಹೆಗಡೆ ಸೇರಿ 9 ಮಂದಿಗೆ ಪರಿಸರ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಪತ್ರಕರ್ತ ನಾಗೇಶ್‌ ಹೆಗಡೆ ಸೇರಿದಂತೆ ಒಂಬತ್ತು ಮಂದಿಗೆ ರಾಜ್ಯ ಸರಕಾರ ಪರಿಸರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿಯ ಆಯ್ಕೆಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿ ಒಟ್ಟು 9 ಮಂದಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ವಿಶ್ವ ಪರಿಸರ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತರಿವರು :

ಆರ್‌.ಕೆ. ನೇಸರ್ಗಿ - ಬೆಳಗಾವಿ (ಪರಿಸರ ಜಾಗೃತಿ ಪ್ರಶಸ್ತಿ), ಟಿ.ಸಿ. ದೇವನಾಥ್‌ - ಹುಣಸೂರು ತಾ. (ಪರಿಸರ ಜಾಗೃತಿ ಪ್ರಶಸ್ತಿ), ಮಂಜುನಾಥ ಹೆಗಡೆ - ಹೊಸಬಾಳೆ (ಜೀವ ವೈವಿಧ್ಯ), ವೆಂಕಟಗಿರಿ - ಶಿವಮೊಗ್ಗ (ಗಿಡಮೂಲಿಕೆ), ಪಿ.ಎನ್‌. ರವೀಂದ್ರ - ಬೆಂಗಳೂರು (ಪರಿಸರ ಸಂಶೋಧನೆ), ಸಿದ್ಧೇಶ್ವರ ಮಹಾಶೆಟ್ಟಿ - ಬೆಳಗಾವಿ (ಸಾಮಾಜಿಕ ಅರಣ್ಯ), ನಾಗೇಶ್‌ ಹೆಗಡೆ - ಬೆಂಗಳೂರು (ಪರಿಸರ ಪತ್ರಿಕೋದ್ಯಮ), ಸಿ. ರಾಮಣ್ಣ - ಬೆಂಗಳೂರು (ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ), ಕೆ. ಪುಟ್ಟಸ್ವಾಮಿ (ವನ್ಯಜೀವಿ), ಡಾ. ಎಚ್‌. ಪರಮೇಶ್ವರ್‌ (ಪರಿಸರ ಆರೋಗ್ಯ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X