Get Updates
Get notified of breaking news, exclusive insights, and must-see stories!

ನರಹಂತಕ ವೀರಪ್ಪನ್‌ಗೆ ಕ್ಷಮೆ,ಜಯಲಲಿತಾಗೆ ಮುತ್ತುಲಕ್ಷ್ಮಿ ಮೊರೆ

ಮೆಟ್ಟೂರು : ವೀರಪ್ಪನ್‌ ಶಿಕಾರಿಗೆ ತಮಿಳುನಾಡಿನ ಜಯಲಲಿತಾ ಸರ್ಕಾರ ಹೊಸ ತಿರುವು ನೀಡಲು ಸಜ್ಜಾಗುತ್ತಿರುವಂತೆಯೇ, ತನ್ನ ಪತಿಗೆ ಕ್ಷಮಾದಾನ ನೀಡುವಂತೆ ಜಯಲಲಿತಾ ಅವರಿಗೆ ಕಾಡುಗಳ್ಳ ವೀರಪ್ಪನ್‌ ಹೆಂಡತಿ ಮುತ್ತುಲಕ್ಷ್ಮಿ ಮನವಿ ಮಾಡಿದ್ದಾಳೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮುತ್ತುಲಕ್ಷ್ಮಿ - ವೀರಪ್ಪನ್‌ ಅಪರಾಧ ಎಸಗಲು ಪರಿಸ್ಥಿತಿಯ ಒತ್ತಡವೇ ಕಾರಣವಾದ್ದರಿಂದ ಆತನಿಗೆ ಕ್ಷಮಾದಾನ ನೀಡಬೇಕು ಎಂದು ಆಗ್ರಹಿಸಿದಳು. ವೀರಪ್ಪನ್‌ಗೆ ಕ್ಷಮಾದಾನ ನೀಡುವ ಮೂಲಕ ತಾವಿಬ್ಬರೂ ಮತ್ತೆ ಒಟ್ಟಾಗಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಆಕೆ ಹೇಳಿದಳು.

ಈ ನಡುವೆ, ಕರ್ನಾಟಕ- ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆಗಳು ಕಾಡುಗಳ್ಳನ ಶೋಧಕ್ಕೆ ತೀವ್ರ ಹುಡುಕಾಟ ನಡೆಸಿವೆ. ವೀರಪ್ಪನ್‌ ಬಂಧನಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ವಿಧಾನಸಭೆ ಅಧಿವೇಶನ ಪ್ರಾರಂಭದಲ್ಲಿ , ರಾಜ್ಯಪಾಲೆ ಫಾತಿಮಾ ಬೀವಿ ತಮ್ಮ ಭಾಷಣದಲ್ಲಿ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+