ಬೆಂಗಳೂರು ಭಾರತದ ನವ ತಂತ್ರಜ್ಞಾನದ ‘ಪವರ್ ಹೌಸ್’- ನಾಸ್ದಾಕ್
ಬೆಂಗಳೂರು : ಭವಿಷ್ಯದಲ್ಲಿ ಜಾಗತಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮುವ ಬಗ್ಗೆ ಯಾವುದೇ ಅನುಮಾನ ಉಳಿದಿಲ್ಲವೆಂದು ಅಭಿಪ್ರಾಯಪಟ್ಟಿರುವ ವಿಶ್ವದ ಬಹುದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಹುದ್ದರಿ ನಾಸ್ದಾಕ್, ಈ ನಿಟ್ಟಿನಲ್ಲಿ ಬೆಂಗಳೂರನ್ನು ವಿಶೇಷವಾಗಿ ಹೆಸರಿಸಿದೆ.
ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸಿರುವ ನಾಸ್ದಾಕ್, ಭಾರತ ಕುರಿತಾದ ತನ್ನ ವಿಶೇಷ ವರದಿಯಲ್ಲಿ ಈ ಮೆಚ್ಚುಗೆ ಮಿಶ್ರಿತ ಆಶಾಭಾವನೆಯನ್ನು ವ್ಯಕ್ತಪಡಿಸಿದೆ. ಹಲವು ಕ್ಷೇತ್ರದಲ್ಲಿನ ಭಾರತದ ಸಾಧನೆಯನ್ನು ಹೆಕ್ಕಿ ತೋರಿಸಿರುವ ನಾಸ್ದಾಕ್, ಈ ನಿಟ್ಟಿನಲ್ಲಿ ಅತ್ಯಂತ ಯಶಸ್ವಿ ಕ್ಷೇತ್ರವಾದ ಮಾಹಿತಿ ತಂತ್ರಜ್ಞಾನದ ಗೆಲುವನ್ನು ಹೆಸರಿಸಿದೆ.
ಭಾರತದ ಕೈಗಾರಿಕಾ ಬೆಳವಣಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿರುವ ವರದಿ, ಈ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ಭಾರತದ ಏಳು ನಗರಗಳನ್ನು ಹೆಸರಿಸಿದೆ. ದೆಹಲಿ, ಕೋಲ್ಕತಾ, ಮುಂಬಯಿ, ಹೈದರಾಬಾದ್, ಪುಣೆ ಹಾಗೂ ಚೆನ್ನೈ ನಾಸ್ದಾಕ್ನ ಗಮನಕ್ಕೆ ಬಿದ್ದ ಇತರ ನಗರಗಳು.
ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿಯೆಂದು, ಹೊಸ ತಂತ್ರಜ್ಞಾನದ ಪವರ್ ಹೌಸ್ ಎಂದು ನಾಸ್ದಾಕ್ ವಿಶೇಷವಾಗಿ ಬಣ್ಣಿಸಿದೆ. ಚಮಕಿನ ಷಾಪಿಂಗ್ ಮಳಿಗೆಗಳು, ಹೊಸ ನಮೂನೆಯ ರೆಸ್ಟೋರೆಂಟ್ಗಳು ಹಾಗೂ ದೇಶದ ಅತ್ಯುನ್ನತ ಉದ್ಯಾನಗಳನ್ನು ಹೊಂದಿರುವ ಬೆಂಗಳೂರು ದೇಶದ ಹೊಸ ಪೀಳಿಗೆಯ ಶ್ರೀಮಂತ - ಮಧ್ಯಮ ವರ್ಗದವರಿಗೆ ಚುಂಬಕವಾಗಿದೆ ಎಂದಿದೆ ನಾಸ್ದಾಕ್ ವರದಿ.
36 ಪುಟಗಳ ನಾಸ್ದಾಕ್ನ ವರದಿ, ಸರ್ಕಾರದ ಪಾತ್ರ ಸೇರಿದಂತೆ ದೇಶದ ವಿವಿಧ ವಿಭಾಗ ವಿಷಯಗಳ ಸಂಬಂಧಿಸಿದಂತೆ ಆಳ ಅಧ್ಯಯನ ನಡೆಸಿದೆ. ಸಾಫ್ಟ್ವೇರ್ ಹಾಗೂ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಭವಿಷ್ಯದ ಜೈವಿಕ, ಫಾರ್ಮಾಸ್ಯೂಟಿಕಲ್ಸ್ ಹಾಗೂ ಟೆಲಿ ಕಮ್ಯುನಿಕ್ಶೇನ್ಸ್ ಕ್ಷೇತ್ರಗಳ ಸಾಧ್ಯಾಸಾಧ್ಯತೆಗಳನ್ನೂ ವರದಿ ಪ್ರಸ್ತಾಪಿಸಿದೆ. ದೇಶದ ಇತ್ತೀಚಿನ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಇನ್ಫೋಸಿಸ್ ಹಾಗೂ ಸತ್ಯಂ ಇನ್ಫೋ ವೇಗಳ ಯಶೋಗಾಥೆಯನ್ನೂ ವರದಿ ಬಣ್ಣಿಸಿದೆ.
ಭಾರತದ ಐಟಿ ಪಿತಾಮಹ ದೇವಾಂಗ್ ಮೆಹ್ತಾ ಅವರ ಸಂದರ್ಶನವನ್ನೂ ಹೊಂದಿರುವ ನಾಸ್ದಾಕ್ನ ವರದಿ ಕೊನೆಯದಾಗಿ ಹೇಳುವುದಿಷ್ಟು - ‘ಭಾರತದ್ದು ಗಣನೀಯ ರೋಮಾಂಚಕ ಗಾಥೆ. ಅದರೊಂದು ಭಾಗವಾಗಿ ಭಾಗಿಯಾಗಲು ನಮಗೆ ಹರ್ಷವೆನಿಸುತ್ತದೆ.’
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications