Get Updates
Get notified of breaking news, exclusive insights, and must-see stories!

ಮೇಷ್ಟ್ರು ವ್ಯಾಪಾರಿಯಾಗುತ್ತಿದ್ದಾರೆ - ಪ್ರೊ. ಜಿಎಸ್‌ಎಸ್‌ ವಿಷಾದ

ಬೆಂಗಳೂರು : ಅಧ್ಯಾಪಕರಲ್ಲಿ ವ್ಯಾಪಾರೀ ಮನೋಭಾವ ಹೆಚ್ಚುತ್ತಿದೆ. ಇದರಿಂದಾಗಿಯೇ ಅಧ್ಯಾಪಕರಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು , ಸಮಾಜ ಕಲುಷಿತಗೊಂಡು ದೇಶ ಹಾಳಾಗುತ್ತಿದೆ ಎಂದು ಹಿರಿಯ ಕವಿ ಪ್ರೊ.ಜಿ.ಎಸ್‌. ಸಿದ್ಧಲಿಂಗಯ್ಯ ವಿಷಾದಿಸಿದ್ದಾರೆ.

75 ವರ್ಷ ತುಂಬಿದ ಜನಪ್ರಿಯ ಕವಿ ಡಾ.ಜಿ.ಎಸ್‌. ಶಿವರುದ್ರಪ್ಪನವರಿಗೆ ಬೆಂಗಳೂರು ಪದವಿ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಎಸ್‌ಎಸ್‌ ಮಾತನಾಡುತ್ತಿದ್ದರು. ಅಧ್ಯಾಪಕರು ನೈತಿಕ ಸ್ಥೈರ್ಯ ಕಳೆದುಕೊಳ್ಳುತ್ತಿರುವುದರಿಂದ ಅಧ್ಯಾಪನ ಕ್ರಿಯೆ ಸತ್ತು ಹೋಗುತ್ತಿದೆ. ಇದರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ತಮಿಳು, ತೆಲುಗು ಹಾಗೂ ಹಿಂದಿ ಅಧ್ಯಯನ ಪೀಠಗಳ ಸ್ಥಾಪನೆಯಲ್ಲಿ ಶಿವರುದ್ರಪ್ಪನವರ ಪಾತ್ರ ದೊಡ್ಡದು. ಉನ್ನತ ಹುದ್ದೆಗಳಿಗೂ ಆಸೆ ಪಡದೆ ಜ್ಞಾನದಾಹ ಹಾಗೂ ಜ್ಞಾನ ನಮ್ರತೆಯನ್ನು ಮೈಗೂಡಿಸಿಕೊಂಡ ಶಿವರುದ್ರಪ್ಪನವರನ್ನು ಪ್ರಸ್ತುತದ ಸಂದಿಗ್ಧ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಅರ್ಥಪೂರ್ಣ ಎಂದು ಜಿಎಸ್‌ಎಸ್‌ ಬಣ್ಣಿಸಿದರು.

ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್‌ ಗೌರವ ಕೃತಿ ಬಿಡುಗಡೆ ಮಾಡಿದರು. ಶೂದ್ರ ಶ್ರೀನಿವಾಸ್‌, ಟಿ.ಎಸ್‌. ದಕ್ಷಿಣಾಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ ಅವರುಗಳು ಶಿವರುದ್ರಪ್ಪನವರ ಗುಣಗಾನ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣಗಳೂ ನಡೆದವು. ಆದರೆ ಇಷ್ಟೆಲ್ಲಾ ಸಂಭ್ರಮಕ್ಕೆ ಕಾರಣರಾದ ಡಾ.ಜಿ.ಎಸ್‌. ಶಿವರುದ್ರಪ್ಪ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ .

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+