ದೆಹಲಿಯಲ್ಲಿ ಹನುಮಂತ, ಅಸ್ಸಾಂನಲ್ಲಿ ಜಾಂಬವಂತ !
ನಾಲ್ಬರಿ : ದೆಹಲಿಯಲ್ಲಿ ಕಪಿ ಮಾನವನ ಚೇಷ್ಟೆಯಾದರೆ, ಅಸ್ಸಾಂನಲ್ಲಿ ಇಗೋ ಬಂದಿದ್ದಾನೆ ಜಾಂಬವಂತ !
ಶನಿವಾರ ಅಸ್ಸಾಂನ ತುಂಬೆಲ್ಲಾ ಕರಡಿ ಮಾನವನ ಸುದ್ದಿಯೇ ಆಡುತ್ತಿತ್ತು. ಸುಮಾರು 20 ಜನರಿಗೆ ಈ ಕರಡಿ ಮಾನವ ತರಚು ಗಾಯಗಳನ್ನು ಮಾಡಿದ್ದಾನಂತೆ. ಪೊಲೀಸರು ಈ ವಿಷಯವನ್ನು ತಿಳಿಸಿದ್ದಾರೆ. ಪೊಲೀಸರಿಗೆ ಈ ವಿಷಯದಲ್ಲಿ ಕಟ್ಟೆಚ್ಚರ ವಹಿಸಿ, ಜಿಲ್ಲಾಡಳಿತಗಳಿಂದ ವರದಿಗಳನ್ನು ತರಿಸಿಕೊಂಡು, ಪರಿಸ್ಥಿತಿ ಪ್ರಕೋಪಕ್ಕೆ ತಿರುಗದಂತೆ ನೋಡಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಅಸ್ಸಾಂನ ಆರೋಗ್ಯ ಸಚಿವ ಭೂಮಿದಾರ್ ಬರ್ಮನ್ ಶನಿವಾರ ತಿಳಿಸಿದ್ದಾರೆ.
ಬರ್ಮನ್ ನಾಲ್ಬರಿ ಜಿಲ್ಲೆಗೆ ಭೆಟ್ಟಿ ಕೊಟ್ಟು , ಪೊಲೀಸರೊಡನೆ ಈ ಬಗ್ಗೆ ಚರ್ಚಿಸಿದ್ದಾರೆ. ನಾನು ವೈಯಕ್ತಿಕವಾಗಿ ಇವನ್ನೆಲ್ಲಾ ನಂಬುವುದಿಲ್ಲ. ಹಾಗಂತ ಸ್ಥಳೀಯ ಜನ ತಾವು ಅನುಭವಿಸಿದ ತೊಂದರೆ ಹೇಳಿಕೊಂಡರೆ ಅದನ್ನು ಕಡೆಗಣಿಸುವ ಹಾಗೂ ಇಲ್ಲ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ ಬರ್ಮನ್.
ಜಾಂಬವಂತ ಏನೇನು ಮಾಡಿದ ಅಂತ ಅದನ್ನು ಅನುಭವಿಸಿದವರ ಮಾತಲ್ಲೇ ಕೇಳಿ...
- ರಮಣಿ ನಾಥ್, ಶಾಲಾ ಶಿಕ್ಷಕ, ತಿಹು ಗ್ರಾಮ- ಧಡ್ ಅಂತ ರಾತ್ರಿ ಸದ್ದಾಯಿತು. ಯಾವುದೋ ಕಪ್ಪು ಆಕಾರ, ಕರಡಿಯನ್ನೇ ಹೋಲುತ್ತಿತ್ತು. ಇನ್ನೇನು ನಮ್ಮ ಮೇಲೆ ಎರಗಬೇಕು ಅನ್ನುವಷ್ಟರಲ್ಲಿ ದೀಪ ಹಾಕಿದೆವು. ಅಷ್ಟರಲ್ಲಿ ಅದು ಮಂಗಮಾಯ ! ನಾವು ಬಚಾವ್.
- ಅದೇ ಹಳ್ಳಿಯ ರಮೇಶ್- ಇದ್ದಕ್ಕಿದ್ದಂತೆ ಏನೋ ಬಂತು. ಕಪ್ಪಗಿತ್ತು. ತರಚು ಗಾಯ ಮಾಡಿತು. ಕರಡಿಯೇ ಇದ್ದ ಹಾಗಿತ್ತು. ಜಮ ಜಮಾಯಿಸಿ, ಏನದು ಅಂತ ನೋಡುವಷ್ಟರಲ್ಲಿ ಕರಗಿಹೋದಂತಾಯಿತು.
- ಮಾಲಬಿಕ ದಾಸ್, ಗೃಹಿಣಿ- ಬಾಗಿಲುಗಳನ್ನು ಮುಚ್ಚಿದರೂ ಕರಡಿ ಮಾನವ ಅವನ್ನು ತೂರಿಕೊಂಡೇ ಬರುತ್ತಾನಂತೆ. ರಾತ್ರಿ ಹೊತ್ತು ನಿದ್ದೆಯೇ ಹತ್ತುತ್ತಿಲ್ಲ.
ನಾಥ್ಕುಚಿ, ದೋಲಾಯ್ಗಾಂವ್ ಹಾಗೂ ಪಹ್ಲ ಗ್ರಾಮದ ಜನರಲ್ಲಿ ಜಾಂಬವಂತನ ಭೀತಿಯಿದ್ದು, ನಿದಿರೆಯಿಲ್ಲದ ರಾತ್ರಿಗಳು ಹೆಚ್ಚಾಗುತ್ತಿವೆಯಂತೆ.
(ಎಎಫ್ಪಿ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications