ಐಪಿಎಸ್ ಕೆಂಪಯ್ಯರ ನೇಮಕವನ್ನು ಪ್ರಶ್ನಿಸಿ ಅಬ್ದುಲ್ ಕರೀಂ ಕೋರ್ಟ್ಗೆ
ಮೈಸೂರು : ಐಪಿಎಸ್ ಅಧಿಕಾರಿ ಕೆಂಪಯ್ಯ ಅವರನ್ನು ಎಸ್ಟಿಎಫ್ನ ಕಮಾಂಡರ್ ಆಗಿ ನೇಮಕ ಮಾಡಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ, ಮೃತ ಪೊಲೀಸ್ ಇನ್ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ತಂದೆ ಅಬ್ದುಲ್ಕರೀಂ ಅವರು ಜೂನ್ ನಾಲ್ಕರಂದು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಲಿದ್ದಾರೆ.
ಕೆಂಪಯ್ಯ ಅವರ ನೇಮಕವನ್ನು ಪ್ರಶ್ನಿಸುವ ಜೊತೆಗೆ, ಅವರು ವೀರಪ್ಪನ್ ಕಾರ್ಯಾಚರಣೆಯನ್ನು ಸೇನೆಗೆ ವಹಿಸಿಕೊಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿಕೊಳ್ಳುವರು. ಉಭಯ ರಾಜ್ಯಗಳ ಕಾರ್ಯಾಚರಣೆಯಲ್ಲಿ ತನಗೆ ಕಿಂಚಿತ್ತೂ ನಂಬಿಕೆ ಉಳಿದಿಲ್ಲವಾದ್ದರಿಂದ ಈ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಕರೀಂ ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ಕೆಂಪಯ್ಯ ಅವರ ನಿಷ್ಕಪಟತೆಯ ಬಗ್ಗೆ ತಮಗೆ ಸಂಶಯವಿರುವುದಾಗಿ ಹೇಳಿರುವ ಕರೀಂ , ಕಳೆದ ಬಾರಿ ರಾಜ್ ಅಪಹರಣದ ಸಂದರ್ಭದಲ್ಲಿ ಟಾಡಾ ಕೈದಿಗಳ ಬಿಡುಗಡೆಯನ್ನು ವಿರೋಧಿಸಿ ಕೋರ್ಟ್ಗೆ ಹೋಗದಂತೆ ತಮ್ಮನ್ನು ಒತ್ತಾಯಿಸಿರುವ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಎಸ್ಟಿಎಫ್ ಕಾರ್ಯಾಚರಣೆಗೆ ಹೇಗೆ ನ್ಯಾಯ ಒದಗಿಸುತ್ತಾರೆ ಎಂದು ಪ್ರಶ್ನಿಸುತ್ತಾರೆ.
ಕೆಂಪಯ್ಯ ಅವರಲ್ಲದೆ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರನ್ನೂ ಪ್ರತಿವಾದಿಗಳೆಂದು ಕರೀಂ ತಮ್ಮ ಅರ್ಜಿಯಲ್ಲಿ ಹೆಸರಿಸಲಿದ್ದಾರೆ.
ಜೂನ್ ಮೂರರಂದು ದೆಹಲಿಯ ಉಗ್ರಗಾಮಿ ವಿರೋಧೀ ಸಂಘಟನೆಯಾಂದು ಕರೀಂ ಅವರಿಗೆ ಸನ್ಮಾನ ಕಾರ್ಯಕ್ರಮವನ್ನಿಟ್ಟುಕೊಂಡಿದ್ದು ಜೂನ್ ನಾಲ್ಕರಂದು ಅವರು ಸುಪ್ರೀಂ ಕೋರ್ಟಿನಲ್ಲಿ ತಮ್ಮ ರಿಟ್ ಅರ್ಜಿಯನ್ನು ಸಲ್ಲಿಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ