ಮೆಜೆಸ್ಟಿಕ್ನಿಂದ ವಿಜಯನಗರಕ್ಕೆಫ್ಲೈಓವರ್-ಸೋಮಣ್ಣ ಕನಸು
ಬೆಂಗಳೂರು : ಮೆಜೆಸ್ಟಿಕ್ನಿಂದ ವಿಜಯನಗರಕ್ಕೆ ಫ್ಲೈಓವರ್ ನಿರ್ಮಿಸುವುದು ನನ್ನ ಜೀವನದ ಕನಸು ಎಂದು ಶಾಸಕ ವಿ.ಸೋಮಣ್ಣ ಮಂಗಳವಾರ ಹೇಳಿದ್ದಾರೆ.
ವಿನಾಯಕ ಬಡಾವಣೆ (35ನೇ ವಾರ್ಡ್) ಯಲ್ಲಿ ಹೊಸ ವಾರ್ಡ್ ಕಚೇರಿ ಮತ್ತು ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ಮೆಜೆಸ್ಟಿಕ್ನ ಶಾಂತಲಾ ಸಿಲ್ಕ್ ಹೌಸ್ನಿಂದ ವಿಜಯನಗರಕ್ಕೆ ಮೇಲ್ಸೇತುವೆ ನಿರ್ಮಿಸಲು ನಾನು ಸಚಿವನಾಗಿದ್ದಾಗ ಪ್ರಯತ್ನಿಸಿದ್ದೆ. ಸೋಮಣ್ಣ ಎಲ್ಲಾ ಹಣವನ್ನೂ ಬಿನ್ನಿಪೇಟೆ ಉದ್ಧಾರಕ್ಕೇ ಬಳಸುತ್ತಾರೆ ಎಂಬ ಅಪವಾದ ಬರಕೂಡದೆಂದು ಹಿಂದಕ್ಕೆ ಸರಿದೆ ಎಂದರು ಸೋಮಣ್ಣ.
ಸುಮಾರು 12 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ವಾರ್ಡ್ ಕಚೇರಿಯಿಂದ ನಾಗರಿಕರ ಕುಂದು ಕೊರತೆಗೆ ತ್ವರಿತ ಪರಿಹಾರ ದೊರಕಲಿದೆ. ರಾಜ್ಯದಲ್ಲೇ ಬಿನ್ನಿಪೇಟೆಯನ್ನು ಮಾದರಿ ವಿಧಾನಸಬಾ ಕ್ಷೇತ್ರವನ್ನಾಗಿ ಮಾಡುವ ಉದ್ದಿಶ್ಯ ನನ್ನದು. ಸುಮಾರು 50 ಕೋಟಿ ರುಪಾಯಿ ವೆಚ್ಚದ ಹಲವಾರು ಅಭಿವೃದ್ಧಿ ಕಾಮಗಾರಿಗಳು ಈಗ ಜಾರಿಯಲ್ಲಿವೆ. ಕಾವೇರಿ 4ನೇ ಹಂತದ ಕುಡಿಯುವ ನೀರಿನ ಯೋಜನೆಗೂ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಸೋಮಣ್ಣ ಹೇಳಿದರು.
ಮೇಯರ್ ಪ್ರೇಮಾ ಕಾರ್ಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಬಿ.ಎಸ್.ಪುಟ್ಟರಾಜು, ಮಾಜಿ ಮೇಯರ್ ಕೆ.ಎಚ್.ಎನ್.ಸಿಂಹ ಮೊದಲಾದವರು ಹಾಜರಿದ್ದರು.
(ಇನ್ಫೋ ವಾರ್ತೆ)