ಶ್ರೀರಂಗಪಟ್ಟಣ ಬಳಿ ರಸ್ತೆ ಅಪಘಾತ: ಪೊಲೀಸ್ ಅಧಿಕಾರಿಗೆ ಗಾಯ
ಮೈಸೂರು : ಶ್ರೀರಂಗಪಟ್ಟಣ ಬಳಿ ಸೋಮವಾರ ಬೆಳಗ್ಗೆ ಕಾರಿಗೆ ಲಾರಿಯಾಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಐಜಿಪಿ ಶಂಕರ್ ಬಿದರಿ ಅವರು ಗಾಯಗೊಂಡಿದ್ದಾರೆ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಹೆಸರು ಮಾಡಿದ್ದ ಈ ಹಿರಿಯ ಪೊಲೀಸ್ ಅಧಿಕಾರಿ ಬಂಧಿತ ವೀರಪ್ಪನ್ ಸಹಚರರ ವಿಚಾರಣೆ ನಡೆಸುತ್ತಿರುವ ನಿಯೋಜಿತ ಟಾಡಾ ವಿಶೇಷ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ತೆರಳುತ್ತಿದ್ದರು.
ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಬಿದರಿ ಅವರ ಕಾರಿಗೆ ಶ್ರೀರಂಗಪಟ್ಟಣಕ್ಕೆ 9 ಕಿ.ಮೀಟರ್ ದೂರದಲ್ಲಿರುವ ಗಣಂಗೂರು ಬಳಿ ಬೆಂಗಳೂರಿನ ಕಡೆಗೆ ಬರುತ್ತಿದ ಲಾರಿಯಾಂದು ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ ಬಿದರಿ ಅವರ ತಲೆಗೆ ಪೆಟ್ಟಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಬಿ.ಎಂ. ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಶಂಕರ್ ಬಿದರಿ ಅವರೊಡನಿದ್ದ ಗನ್ಮ್ಯಾನ್ ಹಾಗೂ ಕಾರಿನ ಚಾಲಕನಿಗೂ ತೀವ್ರ ಗಾಯಗಳಾಗಿವೆ ಎಲ್ಲರೂ ಬಿ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಬಿದರಿ ಅವರ ಯೋಗಕ್ಷೇಮ ವಿಚಾರಿಸಿದರು.
(ಇನ್ಫೋ ವಾರ್ತೆ)