ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಗುರಿಗೆ ಬೆಂಕಿ ತಾಗಿಸುವ ಘಾಟಿ ಬಿಸಿಲು

By Staff
|
Google Oneindia Kannada News

ಶುಕ್ರವಾರ ಬೆಂಗಳೂರಿನಲ್ಲಿ ಮಳೆ ಸುರಿಯುತ್ತದೆನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ ಠುಸ್ಸೆಂದಿದೆ.

ಮುಗಿಲ ಚುಂಬಿಸುವ ಮರದ ಚಿಗುರು ಕಮರಿ ಬೆಂಕಿ ಕಿಡಿ ಹತ್ತಿಕೊಳ್ಳುವಷ್ಟು ಬಿಸಿಲು ಘಾಟಿಯಾಗಿದೆ. ಹತ್ತು ಹೆಜ್ಜೆಗೊಮ್ಮೆ ಬಾಟಲಿ ನೀರು ಖಾಲಿ ಮಾಡುವ ಆಸೆ.

ಆದರೆ ನೀರೆಲ್ಲಿದೆ ? ಬಾವಿಯಾಳದಲ್ಲಿ, ಬೋರವೆಲ್‌ನ ಗಟ್ಟಿ ಸದ್ದಿಗೆ, ಪಂಪುಗಳ ಕಿರುಚಾಟಕ್ಕೆ ಗಂಗೆ ಕೈ ತೇವವಾಗಿಸುತ್ತಿಲ್ಲ. ಕರಾವಳಿಯಲ್ಲಿ ದಿನಕ್ಕೆ ಮೂರು ಬಾರಿ ಸ್ನಾನ ಮಾಡಿದರೂ ನೆಮ್ಮದಿ ತರದೆ ಧಾರೆಗಟ್ಟುವ ಬೆವರು. ಉತ್ತರ ಕರ್ನಾಟಕದಲ್ಲಿ ಸೀಳು ಬಿಟ್ಟಿರುವ ಕೆರೆ ಕಟ್ಟೆಗಳು, ಬೆಂಗಳೂರಿಗರಿಗೆ ಅಸಹನೆ ತಂದಿರುವ ಸೆಕೆ, ಬೇಸಗೆಯೆಂದರೆ ಸಾಕಪ್ಪಾ ಅನಿಸುವಂತೆ ಮಾಡಿದೆ,

ಮೈಸೂರು ಮತ್ತು ಬೆಳಗಾವಿಯಲ್ಲಿ ಉಷ್ಣಾಂಶ ಕನಿಷ್ಠವೆಂದರೆ 20 ಡಿಗ್ರಿ ಸೆಲ್ಷಿಯಸ್‌ನಲ್ಲಿ ನಿಂತಿದೆ. ರಾಜ್ಯದ ಯಾವ ಭಾಗದಲ್ಲೂ ಮಳೆಯ ಸುಳಿವೇ ಇಲ್ಲ . ಭಾನುವಾರವೂ ಒಣಹವೆ ಮುಂದುವರಿಯುವುದಂತೆ. ಅಂದಹಾಗೆ, ನಿಮ್ಮೂರಿನಲ್ಲಿ ಬಿಸಿಲು ಹೇಗಿದೆ ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X