ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂತಕರ ಗುಂಡಿಗೆ ವಿಶ್ವಕರ್ಮಿಗಳ ನಾಯಕ ಪ್ರಭಾಕರ ಆಚಾರ್ಯ ಬಲಿ

By Staff
|
Google Oneindia Kannada News

ಉಡುಪಿ : ವಿಶ್ವ ಕರ್ಮ ಸಮಾಜದ ನಾಯಕ, ನಗರದ ಪ್ರಮುಖ ಉದ್ಯಮಿ ಹಾಗೂ ಉಡುಪಿ ತೆರಿಗೆದಾರರ ವೇದಿಕೆಯ ಅಧ್ಯಕ್ಷ ಅಲೆವೂರು ಪ್ರಭಾಕರ ಆಚಾರ್ಯ ಅವರನ್ನು ಗುರುತು ಸಿಗದ ಹಂತಕರು ಗುಂಡಿಟ್ಟು ಕೊಂದಿದ್ದಾರೆ.

ಗುರುವಾರ ರಾತ್ರಿ ಎಂಟು ಗಂಟೆ ಸುಮಾ-ರಿ-ಗೆ ನಗರದ ಸಿಟಿಬಸ್‌ ನಿಲ್ದಾಣದ ಬಳಿ ಇರುವ ಮಂಗಳ ಜ್ಯುವೆಲ್ಲರ್ಸ್‌ ಕುಳಿ-ತಿ-ದ್ದ ಆಚಾ-ರ್ಯ ಅವ-ರ ಮೇಲೆ, ಏಕಾ-ಏ-ಕಿ ನು-ಗ್ಗಿ-ಬಂ-ದ ದುಷ್ಕರ್ಮಿಗಳು ಗುಂಡು ಹಾರಿಸಿದರು. ಕೆಂಪು ಮಾರುತಿ ಜೆನ್‌ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಒಂದೆರಡು ನಿಮಿಷದಲ್ಲಿಯೇ ಪಲಾಯನ ಮಾಡಿದರು.

ಪ್ರಕರಣವನ್ನು ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದು, ಹಂತಕರ ಶೋಧಕ್ಕೆ ವ್ಯಾಪಕ ಜಾಲ ಹರಡಲಾಗಿದೆ, ಈ ಕೊಲೆ ಕಾರ್ಯ ಜಾಲದಲ್ಲಿ ಸ್ಥಳೀಯರೂ ಭಾಗವಹಿಸಿರಬಹುದಾದ ಸಾಧ್ಯತೆ ಇದೆ ಎಂದು ಎಸ್ಪಿ ಅಮೃತ ಪಾಲ್‌ ತಿಳಿಸಿದ್ದಾರೆ. ಆಚಾರ್ಯ ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X