ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಂತಕರ ಗುಂಡಿಗೆ ವಿಶ್ವಕರ್ಮಿಗಳ ನಾಯಕ ಪ್ರಭಾಕರ ಆಚಾರ್ಯ ಬಲಿ
ಉಡುಪಿ : ವಿಶ್ವ ಕರ್ಮ ಸಮಾಜದ ನಾಯಕ, ನಗರದ ಪ್ರಮುಖ ಉದ್ಯಮಿ ಹಾಗೂ ಉಡುಪಿ ತೆರಿಗೆದಾರರ ವೇದಿಕೆಯ ಅಧ್ಯಕ್ಷ ಅಲೆವೂರು ಪ್ರಭಾಕರ ಆಚಾರ್ಯ ಅವರನ್ನು ಗುರುತು ಸಿಗದ ಹಂತಕರು ಗುಂಡಿಟ್ಟು ಕೊಂದಿದ್ದಾರೆ.
ಗುರುವಾರ ರಾತ್ರಿ ಎಂಟು ಗಂಟೆ ಸುಮಾ-ರಿ-ಗೆ ನಗರದ ಸಿಟಿಬಸ್ ನಿಲ್ದಾಣದ ಬಳಿ ಇರುವ ಮಂಗಳ ಜ್ಯುವೆಲ್ಲರ್ಸ್ ಕುಳಿ-ತಿ-ದ್ದ ಆಚಾ-ರ್ಯ ಅವ-ರ ಮೇಲೆ, ಏಕಾ-ಏ-ಕಿ ನು-ಗ್ಗಿ-ಬಂ-ದ ದುಷ್ಕರ್ಮಿಗಳು ಗುಂಡು ಹಾರಿಸಿದರು. ಕೆಂಪು ಮಾರುತಿ ಜೆನ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಒಂದೆರಡು ನಿಮಿಷದಲ್ಲಿಯೇ ಪಲಾಯನ ಮಾಡಿದರು.
ಪ್ರಕರಣವನ್ನು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದು, ಹಂತಕರ ಶೋಧಕ್ಕೆ ವ್ಯಾಪಕ ಜಾಲ ಹರಡಲಾಗಿದೆ, ಈ ಕೊಲೆ ಕಾರ್ಯ ಜಾಲದಲ್ಲಿ ಸ್ಥಳೀಯರೂ ಭಾಗವಹಿಸಿರಬಹುದಾದ ಸಾಧ್ಯತೆ ಇದೆ ಎಂದು ಎಸ್ಪಿ ಅಮೃತ ಪಾಲ್ ತಿಳಿಸಿದ್ದಾರೆ. ಆಚಾರ್ಯ ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Friday, May 18, 2001, 5:30 [IST]