Get Updates
Get notified of breaking news, exclusive insights, and must-see stories!

ನೀಲಾಕಾಶದಿ ರಾರಾಜಿಸುತಿಹ ಸೂರ್ಯ

ಬೆಂಗಳೂರು : ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಉತ್ತರ ಒಳನಾಡು ಹಾಗೂ ಕರಾವಳಿಯ ಗರಿಷ್ಠ ತಾಪಮಾನದಲ್ಲಿ ಸ್ಪಲ್ಪ ಬದಲಾವಣೆ ಆಗಿದೆ. ಮುನ್ಸೂಚನೆಯ ಪ್ರಕಾರ ಕೂಡ ಮುಂದಿನ 36 ಗಂಟೆಗಳ ಅವಧಿಯಲ್ಲಿ ರಾಜ್ಯದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳೇನೂ ಇಲ್ಲ.

ಗುಲ್ಬರ್ಗಾ ಹಾಗೂ ರಾಯಚೂರಿನಲ್ಲಿ 43 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ಬಿಜಾಪುರದಲ್ಲಿ 41 ಡಿಗ್ರಿ ಸೆಲ್ಸಿಯಸ್‌ ಇತ್ತು. ಬಿಸಿಲು ಧಾರಾಕಾರವಾಗಿ ಸುರಿಯುತ್ತಿತ್ತು. ಮುಂಜಾನೆಯೇ ಎದ್ದ ಮಾನಿನಿಯರು ಸೂರ್ಯ ಪ್ರಖರವಾಗುವ ಮೊದಲೇ ಎಳೆ ಬಿಸಿಲಿನಲ್ಲಿ ಹಪ್ಪಳ, ಸಂಡಿಗೆ ಇಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡ ನೀಲಾಕಾಶದಲ್ಲಿ ರಾರಾಜಿಸುತ್ತಿದ್ದ ಸೂರ್ಯದೇವ ಮೈ ಚುರುಗುಟ್ಟಿಸುತ್ತಿದ್ದ. ಮನೆ ಬಿಟ್ಟು ಹೊರ ಬಂದರಂತೂ ಮುಗಿದೇ ಹೋಯಿತು, ಸಾಕಪ್ಪ ಸಾಕು, ಈ ಸೆಕೆ ತಡೆಯಕ್ಕಾಗಲ್ಲ ಎನ್ನುವ ಮಾತುಗಳು ಅರಿವಿಲ್ಲದೆಯೇ ಹೊರಬರುತ್ತಿದ್ದವು.

ಬೇಸಿಗೆಯಲ್ಲಿ ದೊರೆತಿರುವ ರಜೆಯಲ್ಲಿ ಮನೆಯಲ್ಲಿ ಕೂರದ ಮಕ್ಕಳು ರಸ್ತೆಗಳಲ್ಲಿ, ಮೈದಾನಗಳಲ್ಲಿ ಕ್ರಿಕೆಟ್‌ ಆಡಿ ಕಪ್ಪಾಗಿ ಹೋಗಿದ್ದಾರೆ. ಎಷ್ಟು ನೀರು ಕುಡಿದರೂ ತೀರದ ದಾಹ. ತಂಪು ಪಾನೀಯದ ಅಂಗಡಿಗಳ ಮುಂದೆ ಜನಜಂಗುಳಿ, ಎಳನೀರಿಗೆ ಎಲ್ಲಿಲ್ಲದ ಬೇಡಿಕೆ. ಅಂದಹಾಗೆ ಕಳೆದ ತಿಂಗಳು ಕೇವಲ 4 - 5 ರುಪಾಯಿ ಇದ್ದ ಎಳನೀರು ಈಗ 7 ರುಪಾಯಿ ಆಗಿದೆ. ಎಳನೀರು ಬೆಲೆ ಏರಿದ್ದರೂ, ಬಿಸಿಲು ಮಾತ್ರ ಬಹಳ ಅಗ್ಗವಾಗಿ ಹೋಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+