ನಿನ್ನಿಂದಲೇ ಇದೆಲ್ಲಾ ರಾಮಾಯಣ ! ಬಂದು ಬಿಡು..
ಇದೆಂಥಾ ಬಿಸಿಲು ! ಈ ಹೊತ್ತು ರಾಜ್ಯಾದ್ಯಂತ ಜನ ಮಾತಾಡಿಕೊಳ್ಳುತ್ತಿರುವ ವಿಷಯ ಇದೇನೆ. ಬೆಟ್ಟವನ್ನಾದರೂ ಕಿತ್ತಿಟ್ಟೇನು ಎನ್ನುವ ಹುಮ್ಮಸ್ಸಿನ ಪಡ್ಡೆ ಹುಡುಗರನ್ನೂ ಸುಸ್ತು ಮಾಡಿಬಿಟ್ಟಿದೆ ಬಿಸಿಲಿನ ಝಳ. ಇದು ಎಂದಿನಂತಲ್ಲದ ಬೇಸಿಗೆ, ನಾ ಹುಟ್ಟಂದಿನಿಂದ ಇಂಥಾ ಬೇಗೆಯನ್ನೇ ಕಂಡಿರಲಿಲ್ಲ ಎಂದು ಬೆಂಗಳೂರಿನಲ್ಲಿರುವ ಅಕ್ಕನಿಗೆ ಮಂಗಳೂರಿನ ಹುಡುಗ ಕಾಗದ ಬರೆಯುತ್ತಾನೆ. ಅಂಗಳದಲ್ಲಿನ ಬಾವಿ ಬತ್ತಿದೆ, ಮೀನುಗಳು ಸತ್ತಿವೆ ಎನ್ನುವ ಆತಂಕವೂ ಅಲ್ಲಿದೆ. ಎಸಿ ರೂಮಿನಲ್ಲಿ ಕೂತು ಲೊಚಗುಟ್ಟುತ್ತ ಕೆಲಸ ಮಾಡುವ ಅಕ್ಕನೋ 34 ಡಿಗ್ರಿ ಸೆಲ್ಷಿಯಸ್ ಆಸುಪಾಸಿನ ಉಷ್ಣಾಂಶಕ್ಕೇ ಅಲ್ಲಾಡಿ ಹೋಗಿದ್ದಾಳೆ.
ಈ ನಡುವೆ ಬೆಂಗಳೂರಿನ ನಿವಾಸಿಗಳು- ತಾಳಲಾರೆವು ಈ ಬಿಸಿಲು ಎಂದು ಅಲವತ್ತುಕೊಳ್ಳುತ್ತಿದ್ದರೆ- ಬೆಂಗಳೂರಿಗಿಂತ ಯಾವತ್ತೂ 10 ಡಿಗ್ರಿ ಸೆಲ್ಷಿಯಸ್ ಅಧಿಕ ಉಷ್ಣಾಂಶ ದಾಖಲಿಸುವ ಗುಲ್ಬರ್ಗಾದ ಜನ ಬರಲಿರುವ ದಿನಗಳ ಬಗ್ಗೆ ಚಿಂತಿತರಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ, ಬಿಸಿಲು ಜನರ ಚೈತನ್ಯವನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ, ಅದೇರೀತಿ ಆಸ್ಪತ್ರೆಯ ಮುಂದಿನ ಸಾಲುಗಳನ್ನು ಹೆಚ್ಚಿಸುವಲ್ಲಿ .
ಇಷ್ಟೆಲ್ಲಾ ರಾಮಾಯಣಕ್ಕೆ ಕಾರಣ ಯಾರೆಂದು ಹುಡುಕುತ್ತಾ ಹೋದರೆ, ಬಡಪೆಟ್ಟಿಗೇ ಎದುರಾಗುತ್ತದೆ ಮಳೆ ಎನ್ನುವ ಮಾಯಾಂಗನೆಯ ಹೆಸರು. ರಾಜ್ಯದ ಆಕಾಶದಿಂದ ಅವಳು ಮರೆಯಾದದ್ದೇ ಇದೆಲ್ಲಾ ಆತಂಕ, ಅವಾಂತರಕ್ಕೆ ಕಾರಣ. ಅವಳಾದರೂ ಎಷ್ಟು ದಿನ ಮರೆಯಾದಾಳು ? ಜೂನ್ ಹತ್ತಿರವಾಗುತ್ತಿದೆಯಲ್ಲವೇ ? ಮುಂಗಾರಿನ ಕನಸುಗಳು ಬೀಳುತ್ತಿವೆಯೇ ?
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications