ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಪ್ರದರ್ಶಕರಿಗೆ ಭೂಗತ ದೊರೆಮುತ್ತಪ್ಪ ರೈ ಬೆದರಿಕೆ?

By Staff
|
Google Oneindia Kannada News

ಬೆಂಗಳೂರು : ತನಗೆ ಬೇಕಾದ ನಿರ್ಮಾಪಕರೊಬ್ಬರ ಚಿತ್ರವನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಪ್ರದರ್ಶಕರೊಬ್ಬರಿಗೆ ಭೂಗತ ದೊರೆ ಮುತ್ತಪ್ಪ ರೈ ತಾಕೀತು ಮಾಡಿದ್ದಾನೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ತನಗೆ ಹತ್ತಿರದ ನಿರ್ಮಾಪಕರೊಬ್ಬರ ಚಿತ್ರವನ್ನು ಬೆಂಗಳೂರು, ಮೈಸೂರು ಹಾಗೂ ಹಾಸನನ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲೇಬೇಕು. ಇಲ್ಲವಾದರೆ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ಬರಾಜುವಿಗಾದ ಗತಿಯೇ ನಿನಗೂ ಆಗುತ್ತದೆ ಎಂದು ಮುತ್ತಪ್ಪ ರೈ ಪ್ರದರ್ಶಕ ರಿಗೆ ದುಬೈನಿಂದಲೇ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ನೀನು ಯಾರು ಎಂದು ಪ್ರದರ್ಶಕ ಕೇಳಿದಾಗ, ಹತ್ತಿರದ ಪೊಲೀಸ್‌ ಠಾಣೆಗೆ ಹೋಗಿ ವಿಚಾರಿಸು. ನಾನಾರು ಎಂದು ತಿಳಿಯುತ್ತದೆ ಎಂದು ಮುತ್ತಪ್ಪ ರೈ ಉತ್ತರ ಕೊಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬೆದರಿಕೆ ಕರೆ ಸ್ವೀಕರಿಸಿರುವ ಪ್ರದರ್ಶಕ ಪೊಲೀಸರಿಗೆ ದೂರಿತ್ತಿದ್ದಾರೆ.

ಬಾಲಂಗೋಚಿ : ಮುಂಬೈ ಮಾಫಿಯಾ ಕೈಲಿ ಬಾಲಿವುಡ್‌ ಅನ್ನುವಂತೆ, ಮುತ್ತಪ್ಪ ರೈ ಕೈಲಿ ಸ್ಯಾಂಡಲ್‌ವುಡ್‌ ಅಂತಾಗಬಹುದೇ ?

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X