ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಾಮರಾಜ ನಗರದಲ್ಲಿ ಕರುಳುಬೇನೆಗೆ ಐವರ ಬಲಿ
ಚಾಮರಾಜನಗರ : ಕಳೆದ 24 ಗಂಟೆಯ ಅವಧಿಯಲ್ಲಿ ಉಲ್ಬಣಗೊಂಡ ಕರುಳು ಬೇನೆಯಿಂದಾಗಿ ಐದು ಮಂದಿ ಮೃತ ಪಟ್ಟಿದ್ದು, 27 ಮಂದಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಕುದೇರು ಗ್ರಾಮದಲ್ಲಿ ಇಬ್ಬರು, ನಾಗವಳ್ಳಿ, ಬಿಸಲವಾಡಿ ಮತ್ತು ಆಲೂರು ಗ್ರಾಮಗಳಲ್ಲಿ ತಲಾ ಒಬ್ಬೊಬ್ಬರು ಮೃತರಾಗಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ ಹನೂರು ಪ್ರದೇಶದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕರುಳು ಬೇನೆ ಮರುಕಳಿಸಿ 27 ಮಂದಿ ಅಸ್ವಸ್ಥರಾಗಿದ್ದು ಅವರೆಲ್ಲರರೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಕೆರೆ ಕಟ್ಟೆಗಳ ನೀರನ್ನೇ ಕುಡಿಯಲು ಬಳಸಿರುವುದು ಕರುಳುಬೇನೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಳೆದೊಂದು ತಿಂಗಳ ಅವಧಿಯಲ್ಲಿ 13 ಮಂದಿ ಕರುಳು ಬೇನೆಗೆ ಬಲಿಯಾಗಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Thursday, May 10, 2001, 5:30 [IST]