ಕಾಲ್ಚೆಂಡಿನಾಟದ ಅಭಿಮಾನ ಹಾಗೂ ನೂರಾ ಇಪ್ಪತ್ನಾಲ್ಕು ಸಾವು
ಅಕ್ರ : ಇನ್ನೂ ತಿಂಗಳೂ ಕಳೆದಿಲ್ಲ, ದಕ್ಷಿಣ ಆಫ್ರಿಕದ ಡರ್ಬಾನ್ನ ಫುಟ್ಬಾಲ್ ಪಂದ್ಯವೊಂದರ ನೂಕುನುಗ್ಗಲಲ್ಲಿ 43 ಮಂದಿ ಮೃತಪಟ್ಟು ; ಬುಧವಾರ (ಮೇ.9) ಇದೇ ಕಾಲ್ಚೆಂಡಿನಾಟ ಘಾನಾದ 100ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ತಪ್ಪು ಆಟದ್ದಲ್ಲ ; ಆಟದ ಅಭಿಮಾನದ ಪರಮಾವಧಿಯದ್ದು.
ಹಾರ್ಟ್ಸ್ ಆಫ್ ಓಕ್ ವರ್ಸಸ್ ಅಸಾಂಟೆ ಕೊಟೋಕೋ ಪಂದ್ಯ. ಇವೆರಡೂ ಸ್ಥಳೀಯ ಕ್ಲಬ್ಗಳು. ಪಂದ್ಯ ಪೂರೈಸಲು ಇನ್ನು 5 ನಿಮಿಷಗಳಿದೆ ಎನ್ನುವಾಗ ಕೊಟೋಕೋ ಕ್ಲಬ್ ಅಭಿಮಾನ ಹುಚ್ಚು ಹೊಳೆಯಾಯಿತು. ಹಾರ್ಟ್ಸ್ 2-1 ಗೋಲುಗಳಿಂದ ಮುಂದಿದ್ದುದೇ ಇದಕ್ಕೆ ಕಾರಣ. ಒಂದು ಸ್ಟ್ಯಾಂಡಿನಲ್ಲಿ , ಕುಳಿತ ಚೇರುಗಳ ಸೀಟನ್ನು ಹರಿದು ಅಭಿಮಾನಿಗಳು ಕಣದತ್ತ ಎಸೆಯಲಾರಂಭಿಸಿದರು.
ಪೊಲೀಸರು ಅಭಿಮಾನಿಗಳ ಅತಿರೇಕ ನಿಯಂತ್ರಿಸಲು ಅಶ್ರು ವಾಯು ಸಿಡಿಸಿದರು. ಪರಿಸ್ಥಿತಿ ತಹಬಂದಿಗೆ ಬರುವ ಬದಲು ಇನ್ನಷ್ಟು ಪ್ರಕೋಪಕ್ಕೆ ತಿರುಗಿತು. ಅಭಿಮಾನ ಗಲಭೆ- ದಾಂಧಲೆಯಾಯಿತು. ಘಾನಾದ ಕ್ರೀಡಾ ಖಾತೆಯ ಉಪ ಮಂತ್ರಿ ಜೋ ಆ್ಯಗ್ರಿ, ಬಿಬಿಸಿಗೆ ತಿಳಿಸಿರುವಂತೆ 124 ಫುಟ್ಬಾಲ್ ಪ್ರೇಮಿಗಳು ಗಲಭೆಯಲ್ಲಿ ಸತ್ತಿದ್ದಾರೆ.
ಈಗ ಈ ವಿಷಯ ಚರ್ಚಿಸಲು ಘಾನಾ ಅಧ್ಯಕ್ಷ ಜಾನ್ ಕ್ಯುಪ್ಯುರ್ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಆ್ಯಗ್ರಿ ಕಣ್ಣಲ್ಲಿ ನೀರು ಬರುವುದೊಂದು ಬಾಕಿ, ಅವರು ಅಷ್ಟು ನೊಂದಿದ್ದಾರೆ. ಬದುಕಿ ಬಾಳಬೇಕಾದ ಯುವಕ- ಯುವತಿಯರು ಅನಾಥ ಶವಗಳಾಗಿ ಕಾಲಿಗೆ ಎಡರು ಬಿದ್ದಿರುವುದು ಜೀರ್ಣವಾಗಲೇ ಇಲ್ಲ. ಕೆಲವರು ಉಸಿರುಗಟ್ಟಿ ಸತ್ತಿದ್ದರೆ, ಇನ್ನು ಕೆಲವರನ್ನು ಕೊಲೆ ಮಾಡಲಾಗಿದೆ. ಯೂರೋಪ್ನ ಇತಿಹಾಸದಲ್ಲೇ ಯಾವುದೇ ರಾಷ್ಟ್ರ ಇಂಥಾ ಕ್ರೀಡಾಭಿಮಾನ ಸಾವಾದ ಘಟನೆ ಕಂಡಿರಲಿಲ್ಲ ಎಂದು ಅವರು ಹೇಳುವಾಗ ಗದ್ಗದಿತರಾಗುತ್ತಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications