SSLC RESULT
ಜನ ಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸುವುದರಲ್ಲಿ ನಮ್ಮ ಮಾಧ್ಯಮಗಳು ಯಾವತ್ತೂ ಎತ್ತಿದ ಕೈ. ಅದೂ ದೈನಂದಿನ ಬದುಕನ್ನು ಸರಳಗೊಳಿಸುವ ಮಾತು ಬಂತೆಂದರೆ ನಮ್ಮ ಸರಕಾರ ಮತ್ತು ಅದನ್ನು ಮೀರಿಸುವಂತೆ ಕೆಲಸ ಮಾಡುವ ಮಾಧ್ಯಮಗಳು ಜನಕ್ಕೆ ಎಷ್ಟು ತೊಂದರೆ ಕೊಡುತ್ತಾರೆ ಎಂದರೆ, ಅನುಭವಿಸಿದವರಿಗೆ ಗೊತ್ತು.
ಈ ಹೊತ್ತು ಕರ್ನಾಟಕದಲ್ಲಿ ಮನೆ ಮಾತಾಗಿರುವ ವಿಷಯವೆಂದರೆ ಎಸ್ಎಸ್ಎಲ್ಸಿ ಫಲಿತಾಂಶ. ಹ್ತತಿರ ಹತ್ತಿರ 6 ಲಕ್ಷ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ನಿರಂತರ ಆತಂಕ, ಕುತೂಹಲ ಕೊನೆಗೆ ನಿರಾಸೆಗೊಳಿಸುವ ಉದ್ದಿಶ್ಯ ರಹಿತ ಅವಿವೇಕತನ ಈಗ ಮುಂದುವರೆದಿದೆ. ಮಂತ್ರಿಗಳು ಹೇಳಿದ್ದನ್ನು ಭಟ್ಟಿ ಇಳಿಸುವ ಕುಲಕರ್ಣಿ ಸೇವೆ ಬಿಟ್ಟರೆ , ಹಳ್ಳಿ ವಿದ್ಯಾರ್ಥಿಗಳು ಇವತ್ತೂ ನಂಬಿಕೊಂಡಿರುವ ದಿನಪತ್ರಿಕೆಗಳಲ್ಲಿ ಕರಾರುವಾಕ್ಕಾದ ಮಾಹಿತಿ ಸಿಗುವುದಿಲ್ಲ.
ಇದೆಲ್ಲ ಶುರುವಾಗಿದ್ದು ಕಳೆದ ವರ್ಷ. ಆರಾಮಾಗಿ ವಿದ್ಯಾರ್ಥಿಗಳು ಶಾಲೆಗಳಲ್ಲಿ ಫಲಿತಾಂಶ ನೋಡಿಕೊಂಡು , ಪಾಸೋ ಫೇಲೋ ಮನೆಗೆ ಹೋಗುತ್ತಿದ್ದರು. ಆದರೆ, ಇಂಟರ್ನೆಟ್ನಲ್ಲಿ ಫಲಿತಾಂಶ ಪ್ರಕಟಿಸುವ ವೇಗ ಆರಂಭವಾಯಿತು. ಅನೇಕ ವೆಬ್ಸೈಟುಗಳು ರಿಸಲ್ಟ್ ಪಬ್ಲಿಷ್ ಮಾಡಲು ನಾಮುಂದು ತಾ ಮುಂದು ಎನ್ನುವಂತೆ ಹುರುಪು ತೋರಿಸಿದವು. ಸಾಕಷ್ಟು ಬ್ಯಾಂಡ್ವಿಡ್ತ್ , ಸರ್ವರ್ ಕೆಪ್ಯಾಸಿಟಿ ಇಲ್ಲದೆ ಡುಂಕಿ ಹೊಡೆದವು.
ಈ ವರ್ಷ ? ಫಲಿತಾಂಶಗಳನ್ನು ಇಂಟರ್ನೆಟ್ ಮೂಲಕ ಡಂಗುರ ಮಾಡುವ ಹೊಣೆಯನ್ನು ರಾಜ್ಯ ಸರಕಾರವೇ ಹೊತ್ತು ಕೊಂಡಿದೆ...ಅದರ ಬಗ್ಗೆ ಬೇಕಾದಷ್ಟು ಗೊಂದಲಗಳಿವೆ....
ಶಾಲೆಗಳಿಗಿಂತ ವೆಬ್ಸೈಟ್ನಲ್ಲಿ ರಿಸಲ್ಟ್ ಬೇಗ ಬರತ್ತೆ ಅಂತ ನಂಬಿರುವ ವಿದ್ಯಾರ್ಥಿ ಸಮುದಾಯ ಕಂಡಕಂಡ ವೆಬ್ಸೈಟ್ಗಳಿಗೆ ಕೈಮುಗಿಯುತ್ತಿದ್ದಾರೆ . ಆದರೆ ವೆಬ್ಸೈಟ್ ಹೆಸರೇನು ? ಎಷ್ಟು ಗಂಟೆಗೆ ಫಲಿತಾಂಶ ಹೊರಬೀಳತ್ತೆ ಎಂಬ ಬಗ್ಗೆ ಖಚಿತವಾದ ಮಾಹಿತಿಯನ್ನು ಸರಕಾರದವರು ಕೊಟ್ಟಿಲ್ಲ. ಶಿಕ್ಷಣ ಸಚಿವ ವಿಶ್ವನಾಥ್ ಪ್ರಕಾರ :
- 10 ನೇ ತಾರೀಖು ಗುರುವಾರ ಫಲಿತಾಂಶ ಹೊರಬೀಳತ್ತೆ
- ಆದರೆ ಶಾಲಾ ಆಡಳಿತ ವರ್ಗಕ್ಕೆ ಬುಧವಾರ ಮಧ್ಯಾನ್ಹವೇ ಫಲಿತಾಂಶ ಪಟ್ಟಿ ಸಿಗತ್ತೆ (ಹಳ್ಳಿಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಯಾವತ್ತು ಸಿಗತ್ತೆ ?)
- www.karnatakainformation.org ವಾರ್ತಾ ಇಲಾಖೆ ವೆಬ್ಸೈಟ್ನಲ್ಲಿ ಬುಧವಾರ ಮಧ್ಯಾನ್ಹ 4 ಗಂಟೆಗೆ ಸಿಗತ್ತೆ.
- ಫಲಿತಾಂಶ ವಾರ್ತಾ ಇಲಾಖೆ ಸೈಟ್ನಲ್ಲಿ ರಾತ್ರಿ 9.30ಗೆ ಬರತ್ತೆ. ಆದರೆ, ಶಾಲೆಗಳಿಗೆ ಮಧ್ಯಾನ್ಹ 4 ಗಂಟೆಗೆಲ್ಲ ರಿಸಲ್ಟ್ ಸಿಕ್ಕಿರತ್ತೆ !
ಬೆಲ್ಲದ ಬಣ್ಣದಲ್ಲಿರುವ ಮಂಡ್ಯ ಪೇಪರ್ನಲ್ಲಿ ರಾಜ್ಯಭಾರ ನಡೆಸುವ ಕೃಷ್ಣ ಅವರ ಸರಕಾರಕ್ಕೆ ಇವೆಲ್ಲ ಅರ್ಥವಾಗುವುದಿಲ್ಲ.
ಶಾಲೆಗಳಲ್ಲಿ ಫಲಿತಾಂಶ ಕಾಣದವರು, ಮರಳಿ ಊರಿಗೆ ಹೋಗಲಾರದವರು, ಎಲ್ಲೋ ಕುಳಿತು ಫಲಿತಾಂಶಕ್ಕಾಗಿ ಪರಿತಪಿಸುವವರಿಗೆ ಇಲ್ಲೊಂದು ಆಶಾಕಿರಣ ಇದೆ. ಇಂದು (ಬುಧವಾರ )ರಾತ್ರಿ 11. 00 ಗಂಟೆಗೆ ನಮ್ಮ ವೆಬ್ ಸೈಟಿಗೆ ಬನ್ನಿ. SSLC RESULTS CLICK ಮಾಡಿ. ನಿಮ್ಮನ್ನು ಸರಕಾರದ ವೆಬ್ಸೈಟಿಗೆ ಕರೆದೊಯ್ಯುತ್ತೇವೆ. ಆಲ್ ದಿ ಬೆಸ್ಟ್ .
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications