ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವ್ಯಾಪಾರ- ವ್ಯವಹಾರಗಳಲ್ಲಿ ನಿಮಗಿವತ್ತು ಮುನ್ನಡೆ ಇದೆ. ಧನಲಾಭವನ್ನು ಅರಗಿಸಿಕೊಳ್ಳಲು ಪ್ಲಾನ್ ರೆಡಿ ಮಾಡಿಕೊಳ್ಳುತ್ತೀರಿ.ವೃಷಭ : ಅಪರೂಪದ ಜನರ ಭೇಟಿ, ಅದರಲ್ಲಿಯೂ ಸಜ್ಜನರ ಭೇಟಿಯಿಂದ ಪುಳಕಿತಗೊಳ್ಳುತ್ತೀರಿ. ಹೊಸ ಕನಸುಗಳನ್ನು ಹೆಣೆಯಲು ಇದು ಸಕಾಲ, ಪ್ರೇರಣೆಯೂ ಸಿಗುತ್ತದೆ.
ಮಿಥುನ : ಅವಸರ, ಅಪಘಾತಗಳ ಬಗ್ಗೆ ಕಾಳಜಿಯಿರಲಿ. ಈಗಿರುವ ಅನಾಸಕ್ತಿಯನ್ನು ಹೋಗಲಾಡಿಸಲು ಮೌನದ ಹೊರತಾಗಿ ಬೇರೆ ದಾರಿ ಇಲ್ಲವೆನಿಸುತ್ತದೆ.
ಕಟಕ : ಅತಿಯಾದ ಆತ್ಮವಿಶಾವಸದಿಂದ ನೀವು ಕೆಲವೊಂದು ಸಾರಿ ಜಾರಿ ಬೀಳುವುದು ಉಂಟಲ್ವಾ ? ಆಗೆಲ್ಲಾ ನಿಮ್ಮ ಹತ್ತಿರದ ಸ್ನೇಹಿತರು ನಿಮ್ಮನ್ನು ಮೇಲೆತ್ತುತ್ತಾರೆ.
ಸಿಂಹ : ಇನ್ನೊಬ್ಬರಿಗೆ ಕೆಲಸ ಹಂಚುವುದೆಂದರೆ ನಿಮಗೆ ಖುಷಿ . ಆದರೆ ಎಲ್ಲ ಕ್ಷೇತ್ರಗಳಲ್ಲಿಯೂ ಹಾಗೆ ಆಗುವುದಿಲ್ಲವಲ್ಲಾ ! ಸೋ, ಆಲ್ ದ ಬೆಸ್ಟ್.
ಕನ್ಯಾ : ವೃತ್ತಿಜೀವನದಲ್ಲಿ ಮಹತ್ವದ ಬದಲಾವಣೆಗಳಾಗಬಹುದು. ಹೊಸ ವ್ಯಾಪಾರ ಆರಂಭಿಸುವುದಿದ್ದರೆ ಹಣದ ಚೀಲದ ಕೆಡೆಗೆ ಗಮನ ಇಡಬೇಕು.
ತುಲಾ : ಕೆಲಸ ಕಾರ್ಯಗಳಲ್ಲಿ ಅಂಥ ವೇಗವಿಲ್ಲದಿದ್ದರೂ ಆರ್ಥಿಕ ಹಾನಿ ಇರುವುದಿಲ್ಲ. ಆಷಾಡದ ಉದಾಸೀನದಿಂದ ಹೊರಬನ್ನಿ.
ವೃಶ್ಚಿಕ : ನಿಮ್ಮ ಸ್ನೇಹಿತರ ಆಪತ್ತು ವಿಪತ್ತುಗಳಿಗೆಲ್ಲಾ ತಲೆ ಕೆಡಿಕೊಂಡು ಕೆಲಸ ಹಾಳು ಮಾಡಿಕೊಳ್ಳದೇ ಇದ್ದರಾಯ್ತು. ಆಗ ಸ್ನೇಹಿತರಿಗೂ ತುಸು ಧೈರ್ಯ ತಂದುಕೊಟ್ಟ ಹಾಗಾಗುತ್ತದಲ್ಲವೇ ?
ಧನಸ್ಸು : ಅತಿ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಲು ನಿಧಾನಿಸುತ್ತಿದ್ದೀರಿ. ಆದರೆ ಮುಂದೆ ಸಾಗುವ ದಿಕ್ಕು ಉತ್ತಮವಾಗಿಯೇ ಇದೆ ಎನ್ನುವುದು ಹರ್ಷದ ಸಂಗತಿ.
ಮಕರ : ಯಾರದೋ ಚಾಲೆಂಜಿಗಾದರೂ ನೀವು ಓದು ಮುಗಿಸಬೇಕು. ಕೊನೇ ಪಕ್ಷ ಅದಕ್ಕಾಗಿ ಆರೋಗ್ಯವನ್ನಾದರೂ ಜೋಪಾನವಾಗಿಟ್ಟುಕೊಳ್ಳಬೇಕು.
ಕುಂಭ : ಅನ್ಯೂಶ್ಯುವಲ್ ಕಾರಣಗಳಿಗಾಗಿ ನಿಮ್ಮ ಹೆಸರು ಹತ್ತುಕಡೆ ಕೇಳಿಸುತ್ತಿದ್ದರೆ, ಅದೇನು ನೆಗೆಟಿವ್ ವಿಷಯ ಅಲ್ಲ. ಇವತ್ತು ಮನರಂಜನೆಯ ಮಜ.
ಮೀನ : ಮಾತುಕತೆಯನ್ನು ಅತ್ಯಂತ ಆಸ್ಥೆಯಿಂದ ನಿರ್ವಹಿಸುತ್ತೀರಿ. ಮೇಲಧಿಕಾರಿಗಳಿಂದ ಸಿಗುವ ಪ್ರಶಂಸೆಯ ಸುರಿಮಳೆ ನಿಮ್ಮನ್ನು ಖುಷಿಯಾಗಿರಿಸಲಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications