ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿಗೆ ಬಂತು ವೈಶ್ಯ ಕೋ ಆಪರೇಟಿವ್ ಬ್ಯಾಂಕ್
ತುಮಕೂರು : ರಾಜ್ಯಾದ್ಯಂತ ತನ್ನ ಕವಲುಗಳನ್ನು ಹಬ್ಬಿಸಲು ಉದ್ದೇಶಿಸಿರುವ ವೈಶ್ಯ ಕೋ ಆಪರೇಟಿವ್ ಬ್ಯಾಂಕ್, ತನ್ನ ವಿಸ್ತರಣೆಯ ಮಹತ್ವದ ಹೆಜ್ಜೆಯಾಗಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮೇ 11 ರಿಂದ ಶಾಖಾ ಕಚೇರಿಯನ್ನು ಪ್ರಾರಂಭಿಸಲಿದೆ. ಅಂದಹಾಗೆ, ಇದು ವೈಶ್ಯ ಕೋ ಆಪರೇಟಿವ್ ಬ್ಯಾಂಕ್ನ 6 ನೇ ಶಾಖೆ.
ಬ್ಯಾಂಕ್ನ ಪ್ರಧಾನ ಕಚೇರಿ ತುಮಕೂರಿನಲ್ಲಿದೆ. ಸಹಕಾರಿ ತತ್ವಗಳ ಆಧಾರದ ಮೇಲೆ ಬ್ಯಾಂಕಿಂಗ್ ಸೇವೆಯನ್ನು ಜನ ಸಾಮಾನ್ಯನವರೆಗೆ ತಲುಪಿಸುವುದು ಬ್ಯಾಂಕ್ನ ಉದ್ದೇಶ. ಚಿಕ್ಕಪೇಟೆಯಲ್ಲಿ ತೆರೆಯಲಾಗುತ್ತಿರುವ ಹೊಸ ಶಾಖೆ ಕೂಡ ಈ ಉದ್ದೇಶದ ಹಿನ್ನೆಲೆಯಲ್ಲಿಯೇ ಪ್ರಾರಂಭವಾಗುತ್ತಿದೆ. ಸಂಪೂರ್ಣ ಗಣಕೀಕರಣ ಹಾಗೂ ಹವಾ ನಿಯಂತ್ರಣ ವ್ಯವಸ್ಥೆಯನ್ನು ಚಿಕ್ಕಪೇಟೆಯ ಶಾಖೆ ಒಳಗೊಂಡಿದೆ.
ಈ ಎಲ್ಲಾ ವಿಷಯಗಳನ್ನು ತಿಳಿಸಿದ್ದು ಬ್ಯಾಂಕ್ನ ಅಧ್ಯಕ್ಷ ಎನ್.ಎಸ್. ಜಯಕುಮಾರ್. ಅವರು, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು .
(ಇನ್ಫೋ ವಾರ್ತೆ)
Story first published: Wednesday, May 9, 2001, 5:30 [IST]