ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಇವತ್ತಿನ ದಿನದ ಮಟ್ಟಿಗೆ ಮನರಂಜನೆಗಳನ್ನೆಲ್ಲಾ ಎತ್ತಿ ಬದಿಗಿಡಿ. ಅಷ್ಟೊಂದು ಕೆಲಸಗಳು ನಿಮ್ಮ ಕಾಯುತ್ತಿರುತ್ತವೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ.ವೃಷಭ : ಮನೆಯಲ್ಲಿನ ಸಣ್ಣ ಪುಟ್ಟ ಮಾತುಕತೆಗಳು ನಿಮ್ಮ ಕಂಗೆಡಿಸುತ್ತವೆ. ಹಾಗೆಂದು ಆಫೀಸು ಕೆಲಸಗಳಲ್ಲೂ ಉದಾಸೀನ ತೋರಿಸಿದರೆ, ಆಪತ್ತು ಎದುರಾಗುತ್ತದೆ.
ಮಿಥುನ : ಆರ್ಥಿಕ ಹಾನಿಯಾಗಲಿದೆ ಎಂದರೆ ನೀವು ಜಾಗರೂಕರಾಗಿರಬೇಕು ಎಂದೇ ಅರ್ಥ. ತುಂಬಾ ದಿನಗಳಿಂದ ಪೋಷಿಸಿಕೊಂಡು ಬಂದಿರುವ ಕನಸನ್ನು ಕೈ ಬಿಟ್ಟಿರುವುದಕ್ಕೆ ಬೇಜಾರು ಮಾಡಿಕೊಳ್ಳುತ್ತೀರಿ.
ಕಟಕ : ನಿಮ್ಮ ಯಾವತ್ತಿನ ಅಲವತ್ತುಕೊಳ್ಳುವಿಕೆಗೆ ಇನ್ನೊಬ್ಬರು ತಲೆಕೆಡಿಕೊಳ್ಳಬೇಕು ಎಂಬ ನಿರೀಕ್ಷೆ ಸಲ್ಲದು. ಮನೆಯವರೆಲ್ಲರೂ ನಿಮ್ಮ ಒಳ್ಳೆಯದನ್ನೇ ಹಾರೈಸುತ್ತಾರಲ್ಲವೇ?
ಸಿಂಹ : ಬರೀ ಜಂಬದಿಂದ ಕೆಲಸ ಕಾರ್ಯಗಳಿಗೆ ಹಾನಿ ತಂದಿಟ್ಟುಕೊಳ್ಳುತ್ತೀರಿ. ಕೈತುಂಬಾ ಕಾಸು ಬರಲಿದೆ ಎಂಬುದೇ ದೊಡ್ಡ ಖುಷಿಯ ಸಂಗತಿ.
ಕನ್ಯಾ : ಶಾಪಿಂಗ್ ಹೋಗುವುದೆಂದರೆ ಯಾರಿಗೆ ಖುಷಿಯಿಲ್ಲ ಅಂತ ಹೇಳಿ. ಆದರೆ ಟೋಪಿ ಬೀಳದಂತೆ ಎಚ್ಚರ ವಹಿಸುವುದು ಅಗತ್ಯ.
ತುಲಾ : ನಿಮ್ಮ ಸೃಜನ ಶೀಲ ಕೆಲಸ ಕಾರ್ಯಗಳನ್ನು ಪಕ್ಕಕ್ಕಿಟ್ಟು ತುಂಬಾ ದಿನವಾಗಿದೆ. ಅವುಗಳನ್ನು ಮತ್ತೆ ಆರಂಭಿಸಲು ಉತ್ತಮ ಅವಕಾಶ ನಿಮ್ಮನ್ನರಸಿಕೊಂಡು ಬರಲಿದೆ.
ವೃಶ್ಚಿಕ : ಆಪ್ತರ ಉತ್ತಮ ಮಾತುಗಳಿಗಾಗಿ ಕಾಯುತ್ತಿದ್ದರೆ ನಿರಾಶೆಯಾಗುತ್ತದೆ. ಆದರೆ ದಿನವೆಲ್ಲಾ ಇವತ್ತು ನಿಮ್ಮನ್ನು ಖುಷಿಯಾಗಿರಿಸುತ್ತದಲ್ಲಾ?
ಧನಸ್ಸು : ಆಧ್ಯಾತ್ಮದತ್ತ ನಿಮ್ಮ ಆಸಕ್ತಿ ಕಂಡು ಸ್ನೇಹಿತರು ಆಪ್ತರು ಭಯಪಡುತ್ತಾರೆ. ಆದರೆ ನಿಮ್ಮ ಯೋಚನೆಗಳು, ಚಿಂತನೆಗಳು ನಿಮ್ಮನ್ನು ಉತ್ತಮ ದಾರಿಗೆ ಕೊಂಡೊಯ್ಯಲಿವೆ.
ಮಕರ : ಭ್ರಮೆಗಳು ಕಳೆದುಹೋಗದೇ ಇದ್ದರೆ ನೀವು ತುಂಬಾ ಕಷ್ಟಪಡುತ್ತೀರಿ. ಪ್ರವಾಸ ಹೋಗುವ ಕನಸು ನಿಮ್ಮ ದಿನವನ್ನು ಖುಷಿಯಾಗಿರಿಸುತ್ತದೆ.
ಕುಂಭ : ನಿಮ್ಮ ಯಶಸ್ಸನ್ನು ಕದಿಯಲು ಬೇರೆಯವರು ಹಾಕುತ್ತಿರುವ ಹೊಂಚಿಗೆ ಬಲಿಯಾಗಬೇಡಿ. ಆಪ್ತೇಷ್ಟರ ಭೇಟಿ ಮನಸ್ಸಿಗೆ ನೆಮ್ಮದಿ ತರುತ್ತದೆ.
ಮೀನ : ಇನ್ನೊಬ್ಬರ ಬಗ್ಗೆ ನಿಮ್ಮ ಅತಿ ಕಾಳಜಿಯಿಂದಾಗಿ ನೀವು ಹಿಂದೆ ಬೀಳುತ್ತೀರಿ. ಮನೆ ಮಂದಿಯಾಂದಿಗೆ ಒಂದು ಸಂತಸದ ಸಂಜೆ ಇದೆ. ಅದನ್ನು ಕಳೆದಕೊಳ್ಳಬೇಡಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications