ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕಾ ಹೊಟೇಲಿನಲ್ಲಿ ನಿವೃತ್ತ ಬ್ಯಾಂಕ್‌ ಉದ್ಯೋಗಿ ಕೊಲೆ

By Staff
|
Google Oneindia Kannada News

ಬೆಂಗಳೂರು : ಕರೆನ್ಸಿ ವಿನಿಮಯಕ್ಕೆ ಸಂಬಂಧಿಸಿದಂತೆ ಅನಾಮಧೇಯ ದುಷ್ಕರ್ಮಿಗಳು, ಸಿಂಡಿಕೇಟ್‌ ಬ್ಯಾಂಕ್‌ನ ಇಬ್ಬರು ನಿವೃತ್ತ ಅಧಿಕಾರಿಗಳನ್ನು ಅಶೋಕಾ ಪಂಚತಾರಾ ಹೊಟೇಲಿಗೆ ಕರೆಸಿ, ಓರ್ವನನ್ನು ಕೊಲೆ ಮಾಡಿರುವ ಭೀಕರ ಕೃತ್ಯ ನಗರದಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಆಚಾರ್ಯ (50) ಎಂದು ಗುರ್ತಿಸಲಾಗಿದ್ದು , ನರಸಿಂಹನ್‌ (45) ಎನ್ನುವ ಮತ್ತೊಬ್ಬ ವ್ಯಕ್ತಿ ಗಾಯಗೊಂಡು ಮಲ್ಲಿಗೆ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಲಕ್ಷ ರುಪಾಯಿ ಮೌಲ್ಯದ ಭಾರತೀಯ ಕರೆನ್ಸಿಯನ್ನು ಡಾಲರ್‌ಗಳಿಗೆ ವಿನಿಮಯ ಮಾಡಿಕೊಡುವುದಾಗಿ ನಂಬಿಸಿದ ದುಷ್ಕರ್ಮಿಗಳು, ಇವರಿಬ್ಬರೂ ಹೊಟೇಲ್‌ಗೆ ಬಂದಾಗ, ಮಾದಕ ವಸ್ತು ನೀಡಿ ಕೈ ಕಾಲು ಕಟ್ಟಿ ಸ್ನಾನದ ಟಬ್‌ಗೆಸೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದೆ.

ಸಿಂಡಿಕೇಟ್‌ನ ಬ್ಯಾಂಕ್‌ನ ನೌಕರರಾಗಿದ್ದ ಆಚಾರ್ಯ ಹಾಗೂ ನರಸಿಂಹನ್‌ ಬ್ಯಾಂಕ್‌ನಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅಲಸೂರಿನ ಟ್ರೇಡ್‌ವಿಂಗ್ಸ್‌ ಟ್ರಾವೆಲ್ಸ್‌ ಕಂಪನಿಯಲ್ಲಿ ಆಚಾರ್ಯ ಕಾರ್ಯ ನಿರ್ವಹಿಸುತ್ತಿದ್ದರು. ಆಚಾರ್ಯ ಹಾಗೂ ನರಸಿಂಹನ್‌ ಹಣದೊಂದಿಗೆ ಅಶೋಕಾ ಹೊಟೇಲ್‌ಗೆ ಹೋಗುತ್ತಿದ್ದೇವೆಂದು ಟ್ರಾವೆಲ್ಸ್‌ ಕಂಪನಿಯ ಸಿಬ್ಬಂದಿಗೆ ತಿಳಿಸಿ ತೆರಳಿದವರು, ರಾತ್ರಿ ಬಹಳ ಹೊತ್ತಿನವರೆಗೂ ವಾಪಸ್ಸಾಗದಿದ್ದಾಗ, ಏಜೆನ್ಸಿಯ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದಾಗ ಕೊಲೆ- ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಕೊಠಡಿಯನ್ನು ಪ್ರವೇಶಿಸಿದಾಗ, ಆಚಾರ್ಯ ನಿಧನರಾಗಿದ್ದರೆ, ನರಸಿಂಹನ್‌ ಪ್ರಜ್ಞಾಶೂನ್ಯರಾಗಿದ್ದರು.

ಆಚಾರ್ಯ ಅವರ ಕಾರು ಹೊಟೇಲಿನ ಆವರಣದಲ್ಲಿ ಪತ್ತೆಯಾಗಿದ್ದು , ಹೈಗ್ರೌಂಡ್ಸ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X