ಆಸ್ಟ್ರೇಲಿಯಾದಲ್ಲಿ ಭಾರತದಿಂದ ಕದ್ದ ಹೆಣ್ಣು ಶಿಶುಗಳ ಮಾರಾಟ
* ಪಾರಿತೋಷ್ ಪರಾಶರ್
ಸಿಡ್ನಿ : ಹೆಣ್ಣು ಶಿಶುಗಳ ಕಳವು ಹಾಗೂ ಮಾರಾಟ ಹಗರಣ ಈಗ ಹೊಸ ತಿರುವು ಪಡೆದಿದೆ. ಇಲ್ಲಿನ ಪತ್ರಿಕೆಯಾಂದು ಭಾರತ ಮೂಲದ ಅನಾಥಾಲಯಗಳಿಂದ ಹಾಗೂ ಹೆರಿಗೆ ಆಸ್ಪತ್ರೆಗಳ ವಾರ್ಡ್ನಿಂದ ಕದ್ದ ಮಕ್ಕಳನ್ನು ಆಸ್ಟ್ರೇಲಿಯಾದಲ್ಲಿ ದತ್ತು ನೀಡಲು ಮಾರಾಟ ಮಾಡಲಾಗಿದೆ ಎಂದು ವರದಿ ಮಾಡಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ಮೂಲದ ಕೆಲವು ಮಹಿಳೆಯರು ಹೆಸರನ್ನು ಹಾಗೂ ಮಕ್ಕಳ ಹಕ್ಕು ಪ್ರಚಾರಕರ ಹೇಳಿಕೆಗಳನ್ನು ಉದ್ಧರಿಸಿರುವ ಸಂಡೇ ಹೆರಾಲ್ಡ್, ಭಾರತದ ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಬಹು ಕೋಟಿ ರುಪಾಯಿಗಳ ಈ ಅಂತಾರಾಷ್ಟ್ರೀಯ ರ್ಯಾಕೆಟ್ನಲ್ಲಿ ಆಸ್ಟ್ರೇಲಿಯನ್ನರು ಕೊಂಡಿದ್ದಾರೆ ಎಂದು ಹೇಳಿದೆ.
ಭಾರತದ ಹೆಣ್ಣು ಶಿಶುವೊಂದನ್ನು ಮೆಲ್ಬೋರ್ನ್ನ ದಂಪತಿಗಳಿಗೆ 30,000 ಆಸ್ಟ್ರೇಲಿಯನ್ ಡಾಲರ್ಗಳಿಗೆ ಮಾರಾಟ ಮಾಡಲಾಗಿದೆ. ಆದರೆ, ಆ ಮಗುವಿನ ತಾಯಿಗೆ ದೊರೆತಿದ್ದು ಕೇವಲ 25 ಆಸ್ಟ್ರೇಲಿಯನ್ ಡಾಲರ್ ಮಾತ್ರ ಎಂದು ಭಾರತದ ಹೆಸರಾಂತ ಸಾಮಾಜಿಕ ಹಕ್ಕು ಪ್ರಚಾರಕಿ ಶೋಭಾ ಫನ್ಸೀಕರ್ ಪ್ರಸ್ತಾಪಿಸಿದ್ದಾರೆಂದು ಪತ್ರಿಕೆ ತಿಳಿಸಿದೆ.
ಈ ಮಕ್ಕಳ ಮಾರಾಟ ಜಾಲದಲ್ಲಿ ಹೈದರಾಬಾದ್ ಐದು ದತ್ತಕ ಸಂಸ್ಥೆಗಳು ಭಾಗಿಯಾಗಿವೆ ಎಂದು ಹೈದರಾಬಾದ್ ಬಳಿ ಗ್ರಾಮ್ಯ ಸಂಪನ್ಮೂಲ ಕೇಂದ್ರ ನಡೆಸುತ್ತಿರುವ ಶೋಭಾ ಫನ್ಸೀಕರ್ ಆರೋಪಿಸಿದ್ದಾರೆ. ಈ ದತ್ತಕ ಸಂಸ್ಥೆಗಳ ಪೈಕಿ ಎರಡಕ್ಕೆ ಕೇಂದ್ರ ಸರಕಾರದ ಪರವಾನಗಿ ಕೂಡ ಇದೆ ಎಂದು ಅವರು ಆರೋಪಿಸಿದ್ದಾರೆ. ಇಂತಹ ಇನ್ನೂ ಹಲವು ಸಂಸ್ಥೆಗಳಿರುವ ಬಗ್ಗೆ ಶೋಭಾ ಶಂಕಿಸಿದ್ದಾರೆಂದು ಪತ್ರಿಕೆ ತಿಳಿಸಿದೆ.
ಭಾರತೀಯ ಹೆಣ್ಣು ಮಕ್ಕಳನ್ನು ದತ್ತುವಿನ ಹೆಸರಿನಲ್ಲಿ ಆಸ್ಟ್ರೇಲಿಯಾದ ತಂದೆ - ತಾಯಿಯರಿಗೆ 2,500 ಆಸ್ಟ್ರೇಲಿಯನ್ ಡಾಲರ್ನಿಂದ 10 ಸಾವಿರ ಆಸ್ಟ್ರೇಲಿಯನ್ ಡಾಲರ್ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದೂ ಶೋಭಾ ಅವರನ್ನು ಬೆಂಬಲಿಸಿರುವ ಗ್ಲೋಬಲ್ ಸಿಸ್ಟರ್ಹುಡ್ ನೆಟ್ವರ್ಕ್ನ ಸಂಚಾಲಕರು ತಿಳಿಸಿದ್ದಾರೆ.
ಅನಾಥಾಲಯಗಳಷ್ಟೇ ಅಲ್ಲದೆ, ಅಮಾಯಕ ಹಳ್ಳಿಗರಿಂದ ಮಕ್ಕಳನ್ನು ಅಪಹರಿಸುವ ಏಜೆಂಟರುಗಳು ಕೂಡ ಈ ಕುಕೃತ್ಯದಲ್ಲಿ ತೊಡಗಿದ್ದಾರೆ. ಕೆಲವೊಮ್ಮೆ ಅಪಹರಿಸಲಾಗುವ ಮಕ್ಕಳ ವಯಸ್ಸು ಕೇವಲ ಒಂದು ದಿನವೂ ಆಗಿರುವುದಿಲ್ಲ. ಆಟದ ಮೈದಾನಗಳಿಂದ ಹಾಗೂ ಹೆರಿಗೆ ಆಸ್ಪತ್ರೆಗಳ ವಾರ್ಡ್ಗಳಿಂದ ಕೂಡ ಅಪಹರಣಗಳು ನಡೆದಿರುವ ಶಂಕೆಯಿದೆ. ಅಲ್ಲದೆ, ಮಗು ಒಲ್ಲದ ಗರ್ಭಿಣಿಯರು ಕೂಡ ಏಜೆಂಟರೊಂದಿಗೆ ಸಹಕರಿಸಿದ ಉದಾಹರಣೆಗಳೂ ಇಲ್ಲದಿಲ್ಲ.
ಮಕ್ಕಳ್ನು ಸಾಕಲು ಸಾಮರ್ಥ್ಯವಿಲ್ಲದ ಹಾಗೂ ಹಣದ ಅಗತ್ಯವಿರುವ ಪಾಲಕರಿಗೆ ಅಷ್ಟೋ ಇಷ್ಟೋ ಹಣ ನೀಡಿ ಮಕ್ಕಳನ್ನು ಕೊಂಡಿರುವ ಪ್ರಕರಣಗಳೂ ಇವೆ. ಹೆಣ್ಣು ಮಕ್ಕಳಾದರೆ, ಖರ್ಚು ಹೆಚ್ಚು ಎಂದು ತಿಳಿದಿರುವ ಪಾಲಕರಿಂದ ಹಲವಾರು ಸಕ್ರಮ ಹಾಗೂ ಅಕ್ರಮ ಅನಾಥಾಲಯಗಳು ಹೆಣ್ಣು ಶಿಶುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ.
(ಐ.ಎ.ಎನ್.ಎಸ್)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications