Get Updates
Get notified of breaking news, exclusive insights, and must-see stories!

ಭೀಮೆ, ಕೃಷ್ಣೆಗೆ ನಾಲ್ಕು ಟಿ.ಎಂ.ಸಿ. ನೀರು : ಮಹಾರಾಷ್ಟ್ರ ಭರವಸೆ

ಬೆಂಗಳೂರು : ಕುಡಿಯುವ ನೀರಿಗೂ ತೊಂದರೆ ಪಡುತ್ತಿರುವ ಭೀಮಾ ತಟದ ಜನರ ನೀರಿನ ಸಮಸ್ಯೆ ನೀಗಿಸಲು ಉಜಿನಿ ಜಲಾಶಯದಿಂದ 2 ಟಿ.ಎಂ.ಸಿ. ನೀರು ಬಿಡುವ ಭರವಸೆ ಮಹಾರಾಷ್ಟ್ರದಿಂದ ದೊರಕಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್‌ರಾವ್‌ ದೇಶ್‌ಮುಖ್‌ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ರಾಜ್ಯ ಜಲ ಸಂಪನ್ಮೂಲ ಸಚಿವ ಎಚ್‌.ಕೆ. ಪಾಟೀಲ್‌ ಈ ವಿಷಯ ತಿಳಿಸಿದರು.

ಬಾಗಲಕೋಟೆ, ಗುಲ್ಬರ್ಗಾ, ರಾಯಚೂರು ಪ್ರದೇಶದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದ್ದು, ನದಿ ಬತ್ತಿಹೋಗಿದೆ. ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಜನ - ಜಾನುವಾರುಗಳು ನೀರನ್ನು ಹುಡುಕಿ ಅಲೆಯುತ್ತಿವೆ ಎಂಬುದನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಈ ಹಿನ್ನೆಲೆಯಲ್ಲಿ ಕೊಯ್ನಾ ಅಣೆಕಟ್ಟೆಯಿಂದ ಕೃಷ್ಣ ನದಿಗೆ 2 ಟಿ.ಎಂ.ಸಿ ಹಾಗೂ ಉಜಿನಿಯಿಂದ ಭೀಮಾ ನದಿಗೆ ಎರಡು ಟಿ.ಎಂ.ಸಿ ನೀರು ಬಿಡಲು ತಾತ್ವಿಕವಾಗಿ ಒಪ್ಪಿರುವ ದೇಶ್‌ಮುಖ್‌ ಅನುಕೂಲಕರ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+