ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಯಚೂರಿನ ಶಕ್ತಿನಗರದಲ್ಲಿ ಸುರಿದ ಮಳೆಗೆ ಇಬ್ಬರ ಸಾವು
ರಾಯಚೂರು : ಇಲ್ಲಿನ ಶಕ್ತಿನಗರದಲ್ಲಿ ಸುರಿದ ಭಾರಿ ಮಳೆಗೆ ಮರವೊಂದು ಮಗುಚಿ ಬಿದ್ದು ಮರದ ಕೆಳಗೆ ನಿಂತಿದ್ದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಮೃತಪಟ್ಟ ವ್ಯಕ್ತಿಗಳ ಬಗ್ಗೆ ವಿವರಳು ದೊರಕಿಲ್ಲ. ಮರದ ಪಕ್ಕ ನಿಂತಿದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಗುರುವಾರ ರಾಯಚೂರಿನ ಸುತ್ತ ಮುತ್ತ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಗೆ ಜನ ಜೀವನ ಏರುಪೇರಾಗಿದೆ. ಲಿಂಗಸೂಗೂರು ಮತ್ತು ಮಸ್ಕಿಯಲ್ಲಿ ಭಾರೀ ಮಳೆ ಬಿದ್ದಿರುವುದಾಗಿ ವರದಿಯಾಗಿದೆ.
ರಾಜ್ಯದಲ್ಲಿ, ಕಳೆದ 24 ಗಂಟೆಗಳ ಅವಧಿಯಾಳಗೆ, ಹುಬ್ಬಳ್ಳಿ, ಬಾದಾಮಿ, ಕೆರೂರು, ಕೂಡ್ಲಿಗಿಗಳಲ್ಲಿ ಮೂರರಿಂದ ನಾಲ್ಕು ಸೆಂಟಿ ಮೀಟರಿನಷ್ಟು ಮಳೆಯಾಗಿದೆ. ಹರಿಹರ, ಕೊಪ್ಪಳ, ಹಳಿಯಾಳ, ಸವದತ್ತಿ, ಬೈಲ ಹೊಂಗಲ, ರೋಣ, ಬಾಳೆಹೊನ್ನೂರು ಮತ್ತು ಬಾಗೇವಾಡಿಯಲ್ಲಿಯೂ ಮಳೆ ಬಿದ್ದಿದೆ.
(ಇನ್ಫೋ ವಾರ್ತೆ)
Comments
Story first published: Friday, May 4, 2001, 5:30 [IST]